ರಾಜ್ಯ

ಮಗನ ಸಾವಿನ ವಿಷಯ ತಿಳಿದು ಚಿಕ್ಕಪ್ಪ ಸಹ ಹೃದಯಾಘಾತದಿಂದ ಸಾವು

 ಯಜಮಾನತಿ ತಿಥಿಕಾರ್ಯ ಮಾಡಲು ಹೊರಟ ಕುಟುಂಬಕ್ಕೆ ಶಾಕ್

ಗದಗ  prajakiran.com : ಮನೆಯ ಯಜಮಾನತಿ ತಿಥಿಕಾರ್ಯ ಮಾಡಲು ಹೊರಟ ಕುಟುಂಬಕ್ಕೆ ತಂದೆ, ಮಗ ಒಂದೇ ದಿನ‌ ಸಾವನ್ನಪ್ಪುವ ಮೂಲಕ ಇಡೀ ಕುಟುಂಬ ಕಣ್ಣೀರಿನಲ್ಲಿ ಕೈ ತೊಳೆಯುವಂತೆ ಶಾಕ್ ಆದ ಘಟನೆ ಗದಗ ಜಿಲ್ಲೆಯಲ್ಲಿ ನಡೆದಿದೆ.

ಗದಗ ಜಿಲ್ಲೆ ರೋಣ ತಾಲೂಕಿನ ಗಾಡಗೋಳಿ ಗ್ರಾಮದಲ್ಲಿ ಈ ಮನಕಲಕುವ ಘಟನೆ ನಡೆದಿದ್ದು, ನಿವೃತ್ತ ಶಿಕ್ಷಕ ಕುಬೇರಪ್ಪ ಹೊಸಮನಿ(೬೦) ಹಾಗೂ ಅವರ ಸಹೋದರನ ಮಗ ಪ್ರವೀಣ್ ಹೊಸಮನಿ (೨೫) ಸಾವನ್ನಪ್ಪಿದ್ದಾರೆ.

ಚಿಕ್ಕಪ್ಪ ಕುಬೇರಪ್ಪಅವರೇ ತಮ್ಮ ಸಹೋದರನ ಮಗ ಪ್ರವೀಣ್ ನ ಶಿಕ್ಷಣ, ಲಾಲನೆ, ಪಾಲನೆ ನೋಡಿಕೊಳ್ಳುತ್ತಿದ್ದರು.

ಮನೆ ಯಜಮಾನಿತಿ ತಿಥಿ ಕಾರ್ಯದ ಹಿನ್ನಲೆಯಲ್ಲಿ ಮನೆ ಕ್ಲೀನ್ ಮಾಡುವ ವೇಳೆ –ಪ್ರವೀಣ್ ನಿಗೆ ತೀವ್ರ ಹೃದಯಾಘಾತ ಸಂಭವಿಸಿದೆ. ಸಹೋದರ ಮಗನ ಸಾವಿನ ವಿಷಯ ತಿಳಿದು ಚಿಕ್ಕಪ್ಪ ಸಹ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಮನೆಯ ಯಜಮಾನತಿ ೯ನೇ ದಿನದ ತಿಥಿಕಾರ್ಯ ಮಾಡುವ ವೇಳೆ ಈ ಘಟನೆ ನಡೆದಿದೆ. ಇದರಿಂದ ಕುಟುಂಬದಲ್ಲಿ ದುಃಖದ ಕಾರ್ಮೋಡ ಕವಿದಿದ್ದು, ದಿಕ್ಕೆ ತೋಚದಂತಾಗಿದೆ.

ಚಿಕ್ಕಪ್ಪ ಹಾಗೂ‌ ಸಹೋದರ ಮಗನ ಒಂದೆಕಡೆ ಅಂತ್ಯಕ್ರಿಯೆಗೆ ಕುಟುಂಬಸ್ಥರು ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಗಾಡಗೋಳಿ ಗ್ರಾಮವು ಶೋಕ ಸಾಗರದಲ್ಲಿ ಮುಳುಗಿದೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *