ದಾವಣಗೆರೆ prajakiran.com :ಬೆಣ್ಣೆನಗರಿ ದಾವಣಗೆರೆಯಲ್ಲಿ 2 ತಲೆಯ ಹಾವುಗಳನ್ನು ಮಾರಲು ಯತ್ನಿಸಿದ ಕಿರಾತಕರು ಅಂದರ್ ಆದ ಘಟನೆ ನಡೆದಿದೆ.
ನಗರದ ವಿಶ್ವೇಶ್ವರಯ್ಯ ಪಾರ್ಕ್ ಬಳಿ ಆರೋಪಿಗಳ ಬಂಧನ ಮಾಡಲಾಗಿದ್ದು, ಬಂಧಿತರಿಂದ
2 ತಲೆ ಹಾವುಗಳನ್ನು ವಶಪಡಿಸಿಕೊಳ್ಳಲಾಗಿದೆ.
.ಬಂಧಿತರನ್ನು ಚಿತ್ರದುರ್ಗದ ಗಣೇಶ್(28), ಚನ್ನಗಿರಿಯ ಅಭಿಲಾಷ್(21), ಶಿವಮೊಗ್ಗದ ನಾಗರಾಜ್(34), ಬಳ್ಳಾರಿಯ ಮುತ್ತಪ್ಪ(27) ಹಾಗೂ ಗಾಣದಕಟ್ಟೆಯ ನಿವಾಸಿ ಪ್ರಜ್ವಲ್ ಎಂದು ಗುರುತಿಸಲಾಗಿದೆ. ಆರೋಪಿಗಳಿಂದ ಎರಡು ತಲೆಯ 3 ಹಾವುಗಳನ್ನು ಜಪ್ತಿ ಮಾಡಲಾಗಿದೆ.
ಈ ಕಿರಾತಕರು ಲಕ್ಷಾಂತರ ರೂಪಾಯಿಗೆ 2 ತಲೆ ಹಾವು ಮಾರಲು ಕಾಯುತ್ತಿದ್ದರು ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ.
ನಗರದ CEN ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.