ಸಿನಿಮಾ

ನಟ, ಸಾಹಿತಿ ಸಿದ್ರಾಮ ಕಾರಣಿಕ ಇನ್ನಿಲ್ಲ…..!

ಜಮಖಂಡಿ prajakiran.com : ನಟ, ಸಾಹಿತಿ ಹಾಗೂ ಕನ್ನಡ ಉಪನ್ಯಾಸಕರಾಗಿದ್ದ ಡಾ. ಸಿದ್ರಾಮ ಕಾರಣಿಕ ಅವರು ಗುರುವಾರ ಸಂಜೆ ವಿಜಯಪುರ ಜಿಲ್ಲೆಯ ಜಮಖಂಡಿಯಲ್ಲಿ ವಿಧಿವಶರಾದರು.

ಅವರಿಗೆ ಇಂದು ಏಕಾಎಕಿ ಎದೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರಿಗೆ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗಮಧ್ಯೆ ಇಹಲೋಕ ತ್ಯಜಿಸಿದರು.

ಸುಧಾಕರ ಖಾಂಬೆ ಅವರ ಕೋರೆಗಾವ್ ಕದನ ದಲಿತ ದಿಗ್ವಿಜಯ, ಮರಾಠಿಯ ಅತ್ಯುತ್ತಮ ದಲಿತ ಸಾಹಿತಿಗಳಾದ ಉತ್ತಮ ಕಾಂಬಳೆಯವರ ದೇವದಾಸಿ ಮತ್ತು ಬೆತ್ತಲೆ ಸೇವೆ (ಕರ್ನಾಟಕಕ್ಕೆ ಸಂಬಂಧಿಸಿದ ವಿಷಯ) ಎಂಬ ಹೆಸರಿನಲ್ಲಿ ಈ ಎರಡೂ ಪುಸ್ತಕಗಳನ್ನು ಅದ್ಭುತವಾಗಿ ಕನ್ನಡಕ್ಕೆ ಅನುವಾದಿಸಿಕೊಟ್ಟಿದ್ದರು.

ಕೋರೆಗಾವ್ ಕದನ ಪುಟ್ಟ ಪುಸ್ತಕವು ಮೂರು ಮುದ್ರಣ ಕಂಡಿತ್ತು. ಕನ್ನಡ ಭಾಷೆಯ ಮೇಲೆ ಅದ್ಭುತ ಹಿಡಿತ ಹೊಂದಿದ್ದ ಸಿದ್ರಾಮ ಸಿನಿಮಾ ನಟರಾಗಿ ಉತ್ತಮ ಹೆಸರು ಮಾಡಿದ್ದರು.

ರಮಾಬಾಯಿ ಅಂಬೇಡ್ಕರ್ ಸಿನಿಮಾ ಮೂಲಕ ನಾಡಿನ ಮನೆ ಮಾತಾಗಿದ್ದರು.
ಅವರು ನಾಡಿನ ಎಲ್ಲೆಡೆ ಅಪಾರ ಗೆಳೆಯರ ಬಳಗ ಹೊಂದಿದ್ದರು. ಅವರ ನಿಧನದಿಂದ ಸಾಹಿತ್ಯ ಹಾಗೂ ಸಿನಿಮಾ ಲೋಕಕ್ಕೆ ತುಂಬಲಾರದ ನಷ್ಟ ವಾಗಿದೆ.

ಅವರು ಮೂಲತಃ ರಾಯಭಾಗದವರಾಗಿದ್ದು, ಅಲ್ಲಿಯೇ ಅಂತ್ಯಕ್ರಿಯೆ ನೆರವೇರಲಿದೆ ಎಂದು ತಿಳಿದುಬಂದಿದೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *