ಧಾರವಾಡ prajakiran. com : ಪೇಪರ ಉತ್ಪನ್ನ ವಸ್ತುಗಳನ್ನು ಮಾರಾಟ ಮಾಡುವ ಅಂಗಡಿಗೆ ಬೆಂಕಿ ಬಿದ್ದು ಹಾನಿಯಾದ ಪ್ರಕರಣ ಧಾರವಾಡದ ಸುಪರ್ ಮಾರ್ಕೆಟ್ ನಲ್ಲಿ ನಿನ್ನೆ ರಾತ್ರಿ ಸಂಭವಿಸಿದೆ.
ಅಬ್ದುಲರಜಾಕ್
ಹೆಬ್ಬಳ್ಳಿ ಅವರ ಊಟದ ಎಲೆ ಇನ್ನಿತರ ಸಾಮಗ್ರಿಗಳ ಅಂಗಡಿ ಬೆಂಕಿಗೆ ಈಡಾಗಿದೆ.
ಸುದ್ದಿ ತಿಳಿದ ಕೂಡಲೇ ಕಾರ್ಪೊರೇಟರ್ ಶಂಭುಗೌಡ ಸಾಲಮನಿ ಮತ್ತು ಸಿಪಿಐ ಪ್ರಭು ಗಂಗೇನಹಳ್ಳಿ ಅವರು, ಅಗ್ನಿಶಾಮಕ ದಳ ಕರೆಯಿಸಿ, ಬೆಂಕಿಯನ್ನು ಹತೋಟಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ.
ಸಕಾಲಕ್ಕೆ ಅಗ್ನಿಶಾಮಕ ದಳ ಧಾವಿಸಿ ಬೆಂಕಿ ನಿಯಂತ್ರಿಸದಿದ್ದರೆ ಅಕ್ಕಪಕ್ಕದ ಅಂಗಡಿಗಳಿಗೆ ವ್ಯಾಪಿಸಿ ಇನ್ನೂ ಹೆಚ್ಚಿನ ಹಾನಿ ಆಗುತ್ತಿತ್ತು ಎಂದು ಗೊತ್ತಾಗಿದೆ.
ಬೆಂಕಿ ಅವಘಡದಲ್ಲಿ ಅಂದಾಜು 7- 8 ಲಕ್ಷ ರೂಪಾಯಿಗಳಷ್ಟು ಹಾನಿಯಾಗಿದೆ.
ಈ ಕುರಿತು ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.