ಜಿಲ್ಲೆ ರಾಜ್ಯ

ಸೋಮೇಶ್ವರ ಕೆರೆ ನೀರು ಪೋಲು : ಪಾದಯಾತ್ರೆ ಕೈಗೊಂಡ ಜಯ ಕರ್ನಾಟಕ

ಧಾರವಾಡ Prajakiran. Com : ಐತಿಹಾಸಿಕ ಹಿನ್ನೆಲೆ ಹೊಂದಿರುವ ಸೋಮೆಶ್ವರ ಕೆರೆ ನೀರು ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ. ಅದು ನಮ್ಮ ನಾಡಿನ ಸಂಪತ್ತು.

ಅಭಿವೃದ್ಧಿ ಯೋಜನೆ ನೆಪದಲ್ಲಿ ಕೊಡಿ ಒಡೆದು ನೀರು ಹರಿಬಿಡುವ ಮೂಲಕ ಕರ್ತವ್ಯ ನಿರ್ಲಕ್ಷ್ಯ ತೋರಿದ ಸಣ್ಣ ನೀರಾವರಿ ಇಲಾಖೆಯ ಇಂಜಿನಿಯರ್ ಹಾಗೂ ಕಾಮಗಾರಿ ಗುತ್ತಿಗೆ ಪಡೆದ ಗುತ್ತಿಗೆದಾರ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಹೈಕೋರ್ಟ್ ವಕೀಲ ಪಿ.ಎಚ್. ನೀರಲಕೇರಿ ಆಗ್ರಹಿಸಿದರು.

ಅವತು ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರು ಹಮ್ಮಿಕೊಂಡ ಪ್ರತಿಭಟನೆಗೆ ಬೆಂಬಲಿಸಿ, ಕೆರೆಗೆ  ಭೇಟಿ ನೀಡಿ ವಸ್ತು ಸ್ಥಿತಿಯನ್ನು ಕಣ್ಣಾರೆ ಕಂಡು ಅಧಿಕಾರಿಗಳಿಗೆ ದೂರವಾಣಿ ಮೂಲಕ ತರಾಟೆಗೆ ತೆಗೆದುಕೊಂಡರು.

17 ಎಕರೆ ವಿಶಾಲವಾದ ಕೆರೆಯಲ್ಲಿ 0 .25 ಟಿಎಂಸಿ ನೀರು ಸಂಗ್ರಹ ವಾಗುತ್ತದೆ. ಅದರ ಶೇಕಡ 80 ರಷ್ಟು ನೀರು ಪೊಲು ಮಾಡಿರುವುದು ಯಾವ ಪುರುಷಾರ್ಥ ಕ್ಕೆ ಎಂದು ಕಿಡಿಕಾರಿದರು

ಮೂರು ನಾಲ್ಕು ದಿನಗಳಲ್ಲಿ ಸೂಕ್ರ ಕ್ರಮ ಜರುಗಿಸದಿದ್ದರೆ ಉಗ್ರ ಪರಿಣಾಮ ಎದುರಿಸಬೇಕಾದಿತು ಎಂದು ಗಡುವು ನೀಡಿದರು

ಕೆರೆ ನೀರು ಬಹಳಷ್ಟು ಜನರಿಗೆ ಜೀವ ಜಲವಾಗಿದೆ. ಪ್ರಾಣಿ ಪಕ್ಷಿಗಳ ದಾಹ ನೀಗಿಸಲು ಹಾಗೂ ಕೆರೆಯಲ್ಲಿ ಜಲಚರಗಳು ವಿಲ ವಿಲ ಒದ್ದಾಡಿ ಸಾಯುವಂತೆ ಮಾಡಿದ ಕಾಂಟ್ಯಾಕ್ಟ್ ರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಜಯ ಕರ್ನಾಟಕ ಸಂಘಟನೆಯ ಅಧ್ಯಕ್ಷ ಸುಧೀರ್ ಮುಧೋಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.

 

ಜಿಲ್ಲೆಯ ಪ್ರಾಣಿ ಪಕ್ಷಿಗಳ ಜೀವ ಜಲವಾಗಿರುವ ಶಾಲ್ಮಲಾ ನದಿ ನೀರು ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಪೋಲಾಗಿದೆ.

ಅಲ್ಲದೇ ಆ ಸ್ಥಾನ ಐತಿಹಾಸಿಕ ಹಿನ್ನೆಲೆ ಹೊಂದಿರುವ ಸ್ಥಳ ಅದರ ರಕ್ಷಣೆ ಆಗಬೇಕು.

ನಿರ್ಲಕ್ಷ್ಯ ಧೋರಣೆ ತಾಳಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಧಾರವಾಡ ಜಯ ಕರ್ನಾಟಕ ಸಂಘಟನೆಯ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಆಗ್ರಹಿಸಿದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *