ಧಾರವಾಡ prajakiran.com : ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಇಬ್ಬರು ಮಹಿಳಾ ನೌಕರರ ಸಾವು ಕುರಿತು ಕೊನೆಗೂ ಪ್ರಕರಣ ದಾಖಲಾಗಿದೆ.
ಈ ಬಗ್ಗೆ ತನಿಖೆ ನಡೆಸುವಂತೆ ಪೋಷಕರು ನೀಡಿದ ದೂರಿನ ಅನ್ವಯ ರೇಪ್ ಆಂಡ್ ಮರ್ಡರ್ ಪ್ರಕರಣ ದಾಖಲಾಗಿದೆ.
ಅಲ್ಲದೆ ಸರಕಾರದ ಗಮನ ಸೆಳೆಯುವ ರೀತಿಯಲ್ಲಿ ಹೋರಾಟ ಮಾಡಿದ್ದರು.
ಇಬ್ಬರನ್ನು ಕೆಲಸದ ನಿಮಿತ್ತ ಬಾಗಲಕೋಟೆ ಪ್ರವಾಸ ಎಂದು ಹೇಳಿ ಗೋವಾಗೆ ಕರೆದುಕೊಂಡು ಹೋಗಿ, ಅತ್ಯಾಚಾರ ಮಾಡಿ, ಆನಂತರ ಅಪಘಾತಪಡಿಸಿ ಕೊಲೆ ಮಾಡಲಾಗಿದೆ ಎಂದು ಧಾರವಾಡದ ಉಪನಗರ ಪೊಲೀಸ್ ಠಾಣೆಯಲ್ಲಿ ಮೃತ ಯುವತಿ ಮೇಘನಾ ಸಿಂಗನಾಥ ತಾಯಿ ಪ್ರತಿಭಾ ಸಿಂಗನಾಥ ದೂರು ದಾಖಲಿಸಿದ್ದಾರೆ.
ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕುಲಪತಿಯ ಆಪ್ತ ಸಹಾಯಕ ಎಂ.ಎ. ಮುಲ್ಲಾ ಹಾಗೂ ಕೃಷಿ ವಿಶ್ವವಿದ್ಯಾಲಯದ ಸ್ಟೇನೋಗ್ರಾಫರ್ ಉಳವಪ್ಪ ಮೇಸ್ತ್ರಿ ಮೇಲೆ ಐಪಿಸಿ 1860 (ಯು/ಎಸ್- 354(ಎ), 376, 302, 34) ಪ್ರಕರಣ ದಾಖಲಾಗಿದೆ.
ಧಾರವಾಡದ ಶುಕ್ರವಾರ ಪೇಟೆಯ ಜೋಶಿ ಗಲ್ಲಿ ನಿವಾಸಿ ಮೇಘನಾ ಸಿಂಗನಾಥ ಹಾಗೂ ಧಾರವಾಡದ ರೇಖಾ ಕೊಕಟನೂರ ಅವರನ್ನ ದುರ್ಬಳಕೆ ಮಾಡಿಕೊಂಡು ಕೊಲೆ ಮಾಡಲಾಗಿದೆ ಎಂದು ಪ್ರತಿಭಾ ಸಿಂಗನಾಥ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಈ ಹಿಂದೆ ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ, ಶ್ರೀ ರಾಮಸೇನಾ ಮುಖ್ಯಸ್ಥ ಪ್ರಮೋದ ಮುತಾಲಿಕ್, ಜಯ ಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷ ಸುಧೀರ ಮುಧೋಳ ಗಂಭೀರವಾದ ಆಪಾದನೆ ಮಾಡಿ ಹೋರಾಟದ ಎಚ್ಚರಿಕೆ ನೀಡಿದ್ದರು.
ಹೀಗಾಗಿ ಪೊಲೀಸರು ಪ್ರಕರಣ ದಾಖಲಾಸಿಕೊಂಡು ಸತ್ಯಾ ಸತ್ಯತೆಯನ್ಬು ಬೆಳಕಿಗೆ ತರಬೇಕಾಗಿದೆ.