ನವದೆಹಲಿ prajakiran.com : ದೇಶವು ಕರೋನಾ ಸಂಕಷ್ಟದ ದಿನಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರ 77ನೇ ಮನ್ ಕಿ ಬಾತ್ ಮುಗಿಸಿದ್ದು, ಎಳು ವರ್ಷಗಳ ಕಾಲ ಮಾತುಗಳ ಮೂಲಕವೇ ಪೂರೈಸಿದ್ದಾರೆ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಮೋದಿಯವರ ಮಾತುಗಳನ್ನು ಕಟುವಾಗಿ ಟೀಕಿಸಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮವಾದ ಟ್ವಿಟರ್ ನಲ್ಲಿ ಟ್ವೀಟ್ ಮಾಡಿದ್ದು, ಕೊರೋನಾ ನಿರ್ವಹಣೆಗೆ ವ್ಯರ್ಥ ಮಾತುಗಳ ಅವಶ್ಯಕತೆ ಖಂಡಿತಾ ಇಲ್ಲ.
ಇದಕ್ಕೆ ಬೇಕಾಗಿರುವುದು ಒಂದು ಸರಿಯಾದ ಯೋಜನೆ, ಉದ್ದೇಶ ಮತ್ತು ನಿರ್ಣಯಗಳು.
ಇದನ್ನು ಬಿಟ್ಟು ಆಧಾರವಿಲ್ಲದ ವ್ಯರ್ಥ ಮಾತುಗಳನ್ನು ಆಡಿದರೆ ದೇಶಕ್ಕೆ ಹಾಗೂ ದೇಶದ ಜನತೆಗೆ ಯಾವುದೇ ರೀತಿಯ ಉಪಯೋಗವಿಲ್ಲ ಎಂದು ರಾಹುಲ್ ಗಾಂಧಿ ಟೀಕಿಸಿದ್ದಾರೆ.