ಹುಬ್ಬಳ್ಳಿ prajakiran.com : ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮೇಯರ್ ಈರೇಶ ಅಂಚಟಗೇರಿ ಅವರ ಸಾರಥ್ಯದಲ್ಲಿ ದೇಶದ ಮೊದಲ ಬುಡಕಟ್ಟು ಜನಾಂಗದ ಮಹಿಳೆ ರಾಷ್ಟ್ರಪತಿ ಹುದ್ದೆಗೆ ಏರಿದ ಹಿನ್ನೆಲೆಯಲ್ಲಿ ಪೌರ ಸನ್ಮಾನ ಮಾಡಿತ್ತು.
ಈ ಕಾರ್ಯಕ್ರಮದ ಹೆಸರಿನಲ್ಲಿ 1.5 ಕೋಟಿ ದುಂದು ವೆಚ್ಚ ಮಾಡಲಾಗಿದೆ.
ಜೊತೆಗೆ ಲಂಚಾವತಾರ ನಡೆದಿದೆ ಎಂದು ಛೀಮಾರಿ ಹಾಕಲಾಗುತ್ತಿದೆ ಎಂದು ಬರೆದಿದ್ದಾರೆ.
ಪೇ 40% ಪೋಸ್ಟ್ ಪರವಿರೋಧ ಚರ್ಚೆ ನಡೆದಿದ್ದು ಅವರು ಬರೆದ ಪೋಸ್ಟ್ ವಿವರ ಹೀಗಿದೆ.
Iresh Anchatgeri ರವರೇ ನಿಮ್ಮ ಲಂಚಾವತಾರವನ್ನು ಸಾರುವ #PayMayor ಪೋಸ್ಟರ್ ನೋಡಿ ಜನ ಛೀಮಾರಿ ಹಾಕುತ್ತಿದ್ದಾರೆ.
ರಾಷ್ಟ್ರಪತಿ ಶ್ರೀಮತಿ Draupadi Murmu ಅವರಿಗೆ ಪೌರ ಸನ್ಮಾನ ಹೆಸರಿನಲ್ಲಿ ಸುಮಾರು 1.5 ಕೋಟಿ ರೂ ದುಂದು ವೆಚ್ಚ ಮಾಡಿ ಪೆಂಡಾಲ್ ಹಾಕಿದ ಮೇಲೆ ಕೊಟೇಶನ್ ಕೇಳಿ ಹುಬ್ಬಳ್ಳಿಯ ಮಾನ ಕಳೆದ ನೀವು ತಕ್ಷಣ ಲೆಕ್ಕಕೊಡಿ
#NimHatraIdyaUttara ?
ಇಲ್ಲವೆ ರಾಜೀನಾಮೆ ನೀಡಿ !!!
ಇದರೊಂದಿಗೆ
ಕಸದ ತೋಟ್ಟಿಗೆ ಕೂಡ ಪೋಸ್ಟರ್ ಅಂಟಿಸಲಾಗಿದೆ.
ಆ ಪೋಸ್ಟ್ ವಿವರ ಹೀಗಿದೆ.
ಕೆಲಸದ ಬಗ್ಗೆ ಚಿಂತೆ ಬೇಡ ಕಮೀಷನ್ ಕೇವಲ #PAYMAYOR ಮಾಡಿ.. #40PercentSarkara