- ನೆಲ್ಲಿಕಾಯಿ ಷರಬತ್ತು
- ಒಳ್ಳೆಯ ಜಾತಿಯ ನೆಲ್ಲಿಕಾಯಿಯನ್ನು ತಂದು ಕುಟ್ಟಿ ಬೀಜ ತೆಗೆದು ಹಸುವಿನ ಹಾಲು ಹಾಕಿ ರುಬ್ಬಿ ರಸ ಹಿಂಡಿಕೊಂಡು ಈ ರಸ ಅಳತೆ ಒಂದು ಶೇರಿಗೆ ಕಚ್ಚ 3 ಸೇರು ಅಷ್ಟೇ ಗ್ರಾಂ ಸಕ್ಕರೆ ಹಾಕಿ ಸ್ವಲ್ಪ ಸೀ ನೀರು ಹಾಕಿ ಪಾತ್ರೆಯಲ್ಲಿ ಪಾಕವಿಟ್ಟು ಷರಬತ್ತು ಪಾಕವಿಳಿಸಿ ಸೀಸೆಯಲ್ಲಿ ಇಟ್ಟುಕೊಂಡು ಹೊತ್ತಿಗೆ ಒಂದು ತೊಲೆಯ ಪ್ರಕಾರ ತೆಗೆದುಕೊಳ್ಳಬೇಕು. ಶಲದಿ ವರ್ಜ ಇದರಿಂದ ಮೇಹ ಪಿತ್ತ ಶಾಂತಿಯಾಗುವುದು.
- ನಿಂಬೆಹಣ್ಣಿನ ಷರಬತ್ತು
- ನಿಂಬೆಹಣ್ಣಿನ ರಸ ತೆಗೆದು ಬಟ್ಟೆಯಲ್ಲಿ ಶೋಧಿಸಿದ್ದು, ಅರ್ಧಶೇರು ನಿಂಬೆ ಸಿಪ್ಪೆಯ ಚೂರ್ಣ 1 ತೊಲೆ ಅಷ್ಟೇ ಗ್ರಾಂ ಸಕ್ಕರೆ 2 ಶೇರು ಸೇರಿಸಿ ಪಾಕ ವೆತ್ತಿ ಷರಬತ್ತು ಮಾಡಬೇಕು. ಇದರ ಸೇವನೆಯಿಂದ ಪಿತ್ತ, ದಾಹ ಶಮನವಾಗಿ ಮೇಹಕಾರಕಗಳು ದೂರವಾಗುವವು.
- ದೊಡ್ಡ ದ್ರಾಕ್ಷಿ ಷರಬತ್ತು
- ದೊಡ್ಡ ದ್ರಾಕ್ಷಿ ಕಷಾಯ 6 ತೊಲೆ 15 ತೊಲೆಯಷ್ಟು ಗ್ರಾಂ ಸಕ್ಕರೆ ಸೇರಿಸಿ ಪಕ್ಯವಾಗಿ ಕಾಯಿಸಿ ಇಳಿಸುವ ಸಮಯದಲ್ಲಿ ಸ್ವಲ್ಪ ಪುದಿನಾ ಎಲೆಯನ್ನು ಹಾಕುವುದು.
- ಉಪಯೋಗ ಪ್ರತಿದಿನವು ಒಂದು ತೊಲೆಯಂತೆ ಸೇವಿಸುವುದರಿಂದ ವಾಂತಿ, ಬಾಯಿ ಹುಣ್ಣು ಮೊದಲಾದವು ತೊಲಗಿ ದೇಹಕ್ಕೆ ಆರೋಗ್ಯವನ್ನುಂಟು ಮಾಡುವುದು.
ಮಾಹಿತಿ : ಶಶಿಕಾಂತ ದೇವಾಡಿಗ, ನಾಟಿ ವೈದ್ಯರು