ಬೆಂಗಳೂರು prajakiran.com : ರಾಹುಲ್ ಗಾಂಧಿ ವಿರುದ್ದ ಟೀಕಿಸುವ ಭರದಲ್ಲಿ ನಾಲಿಗೆ ಹರಿಬಿಟ್ಟ ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ್ ಕಟೀಲ್ ವಿರುದ್ದ ಕಾಂಗ್ರೆಸ್ ಪಕ್ಷದ ನಾಯಕರು ಮುಗಿ ಬಿದ್ದಿದ್ದಾರೆ.
ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ ಸುರ್ಜೆವಾಲಾ ಮಾತನಾಡಿ, ಅದಾನಿ ಬಳಿಯ ಡ್ರಗ್ಸ್ ಇವರ ರಕ್ತದಲ್ಲಿ ಹರಿಯುತ್ತಿದೆಯಾ. ಇಂತಹ ಹೇಳಿಕೆ ನೀಡುವ ಮೂಲಕ ತಮ್ಮ ಮಾನಸಿಕ ಸ್ಥಿತಿಯನ್ನು ಬಿಜೆಪಿ ತೋರಿಸಿದೆ ಎಂದು ಗುಡುಗಿದರು.
ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ಅವರೊಬ್ಬ ಅಪ್ರಬುದ್ದ ರಾಜಕಾರಣಿ, ಅವರು ಒಂದು ರಾಷ್ಟ್ರೀಯ ಪಕ್ಷದ ಅಧ್ಯಕ್ಷರಾಗಿ ಹೀಗೆ ಹೇಳಿರುವುದು ನೋಡಿದರೆ
ಮಾನಸಿಕ ಅಸ್ವಸ್ಥನಂತೆ ಕಾಣಿಸುತ್ತಿದೆ.
ಹೀಗಾಗಿ ನಿಮಾನ್ಸ್ ಗೆ ಹೋಗುವುದು ಸೂಕ್ತ. ಅವರನ್ನು ಕೂಡಲೇ ರಾಜ್ಯಾಧ್ಯಕ್ಷ ಸ್ಥಾನದಿಂದ ಜೆ.ಪಿ ನಡ್ಡಾ ಕಿತ್ತು ಹಾಕಬೇಕು ಎಂದು ಕಿಡಿಕಾರಿದರು.
ಕೆಪಿಪಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ದಿಮೇಶ ಗುಂಡುರಾವ್ ಸೇರಿ ಹಲವರು ವಾಗ್ದಾಳಿ ನಡೆಸಿದರು.