ರಾಜ್ಯ

ವಿನಯ ಕುಲಕರ್ಣಿ ಮನೆಯಲ್ಲಿ ಎರಡು ಗಂಟೆ ಚರ್ಚೆ ನಡೆಸಿದ ಎಂ.ಬಿ.ಪಾಟೀಲ್

ಧಾರವಾಡ prajakiran.com :
ಮಾಜಿ ಸಚಿವ ವಿನಯ ಕುಲಕರ್ಣಿ ಬಂಧನ ರಾಜಕೀಯ ಪ್ರೇರಿತ ಎಂದು
ಮಾಜಿ ಸಚಿವ ಎಂ.ಬಿ.ಪಾಟೀಲ್ ಹೇಳಿದರು.

ಅವರು ಶುಕ್ರವಾರ ಧಾರವಾಡದಲ್ಲಿ
ವಿನಯ ಕುಲಕರ್ಣಿ ಮನೆಗೆ ಭೇಟಿ ನೀಡಿ ಎರಡು ಗಂಟೆ ಚರ್ಚೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಸುಪ್ರೀಂ ಕೋರ್ಟ್ ನಲ್ಲಿ ಡಿಸ್‌ಮಿಸ್ ಆಗಿದ್ದ ಕೇಸ್ ಅದು.

ಅದನ್ನು ರೀ ಓಪೆನ್ ಮಾಡಲಾಗಿದೆ.
ಈ ಸಂಬಂಧ ಸಂಕಷ್ಟ ಎದುರಾಗಿದೆ ಎಂದರು.
ಇದು ದ್ವೇಷದ‌ ರಾಜಕಾರಣ.

ಅಧಿಕಾರ ಯಾವತ್ತೂ ಶಾಶ್ವತವಲ್ಲ
ಚುನಾವಣೆಯಲ್ಲಿ ಸೋಲು ಗೆಲುವು ಸಹಜ.
ಆದರೆ ದ್ವೇಷದ‌ ರಾಜಕಾರಣ ಮಾಡೋದು ಸರಿಯಲ್ಲ.

ಈ ಸಂಬಂಧ ಕಾನೂನು ಸಮರ ನಡೆಯುತ್ತದೆ ಎಂದು ತಿಳಿಸಿದರು.
ನನ್ನ ತಪ್ಪಿಲ್ಲ ಅಂತಾ ವಿನಯ ಹೇಳಿದ್ದಾರೆ.
ಹಲವಾರು ಬಾರಿ ನನ್ನೆದುರು ಹೇಳಿದ್ದಾರೆ

ಅವರು ನಿರಪರಾಧಿಯಾಗಿ ಹೊರ ಬರುತ್ತಾರೆ.
ಆ ವಿಶ್ವಾಸ ನಮಗಿದೆ
ಅವರ ಮನೆಯವರಿಗೆ ಧೈರ್ಯ ಹೇಳಬೇಕಾಗಿದೆ.

ವಿನಯ ಹೊರಗೆ ಬಂದ ಬಳಿಕ ದೊಡ್ಡ ನಾಯಕನಾಗಿ ಬೆಳೆಯುತ್ತಾರೆ ಎಂಬ ವಿಶ್ವಾಸ ನಮಗಿದೆ.
ಬಿಜೆಪಿ ತನಿಖಾ ಸಂಸ್ಥೆಗಳನ್ನು ದುರಪಯೋಗಪಡಿಸಿಕೊಳ್ಳುತ್ತಿದೆ.

ಏನೇ ಆಗಲಿ ಪಕ್ಷ ವಿನಯ ಜೊತೆಗೆ ಇದೆ.
ಕಾನೂನು ಸಮರವಂತೂ ಇದ್ದೇ ಇದೆ ಎಂದು ಎಂ.ಬಿ. ಪಾಟೀಲ ವಿವರಿಸಿದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *