ಧಾರವಾಡ prajakiran.com :
ಐಪಿಎಲ್ ಬೆಟ್ಟಿಂಗ್ ಹಣ ವಾಪಸ್ ಕೊಡದಿದ್ದಕ್ಕೆ ಕೊಲೆ ಮಾಡಿದವನಿಗೆ ಧಾರವಾಡದ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ.
ಫಾರೂಕ್ ಬೆಳಗಾಂವಕರ, ಶಿಕ್ಷೆಗೊಳಗಾದ ಆರೋಪಿ. ಧಾರವಾಡದ 4ನೇ ಅಧಿಕ ಸತ್ರ ನ್ಯಾಯಾಲಯದಿಂದ ತೀರ್ಪು ಬಂದಿದೆ.
2019ರಲ್ಲಿ ಬೆಟ್ಟಿಂಗ್ ನಲ್ಲಿ ಫಾರೂಕ್ ಬಳಿ 2 ಸಾವಿರ ರೂ. ಸೋತಿದ್ದ
ವಿಕ್ರಮ್, ಬಳಿಕ ಹಣ ಮರಳಿ ನೀಡಿದ್ದಿಲ್ಲ.
ಹಣ ಕೊಡದ ಕಾರಣಕ್ಕೆ ವಿಕ್ರಮ್ ವಾಸವಿದ್ದ ಪಿಜಿಗೆ ಹೋಗಿ ಚಾಕುವಿನಿಂದ ಹೊಟ್ಟೆಗೆ ಇರಿದು ಕೊಲೆ ಮಾಡಿದ್ದ. ಧಾರವಾಡ ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಫಾರೂಕ ಆರೋಪ ಎಸಗಿದ ಬಗ್ಗೆ ರುಜುವಾತ ಆಗಿದ್ದರಿಂದ ಇತನಿಗೆ 4ನೇ ಅಧಿಕ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀಮತಿ ಪಂಚಾಕ್ಷರಿ ಎಮ್ ಅವರು ಕಲಂ: 302 IPC ಅಡಿಯಲ್ಲಿ ಜೀವಾವಧಿ
ಶಿಕ್ಷೆ ವಿಧಿಸಿದ್ದಾರೆ.
ಸದರ ಪ್ರಕರಣದಲ್ಲಿ ಪ್ರಶಾಂತ ತೊರಗಲ ಸರ್ಕಾರಿ ಅಭಿಯೋಜಕರು ಸರ್ಕಾರದ ಪರವಾಗಿ ವಾದ ಮಂಡನೆ ಮಾಡಿದ್ದರು.
ಮತ್ತು ಸದರ ಪ್ರಕರಣದಲ್ಲಿ ಮಹಾಂತೇಶ ಬಸಾಪೂರ ಪಿ.ಐ ಉಪನಗರ ಪೊಲೀಸ ಠಾಣೆ ಧಾರವಾಡ ಆರೋಪಿತನ ವಿರುದ್ದ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.