ಧಾರವಾಡprajakiran.com : ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಅಗ್ನಿಪಥ್ ಯೋಜನೆ ವಿರುದ್ಧ ಸೇನಾ ನೇಮಕಾತಿ ತರಬೇತಿ ಪಡೆಯುತ್ತಿದ್ದ ವಿದ್ಯಾರ್ಥಿಗಳು ಶನಿವಾರ ದಿಢೀರ್ ಪ್ರತಿಭಟನೆ ನಡೆಸಿದ ಘಟನೆ ಧಾರವಾಡದಲ್ಲಿ ನಡೆದಿದೆ.
ಈ ವೇಳೆ ಪರಿಸ್ಥಿತಿ ಕೈ ಮೀರುತ್ತಿದ್ದಂತೆ ಪೊಲೀಸರು ಲಾಠಿ ಪ್ರಹಾರ ನಡೆಸಿ, ಶಾಂತಿ ಕಾಪಾಡಲು ಹರಸಾಹಸ ನಡೆಸಿದರು.
ಕೊವೀಡ್ ಹಿನ್ನೆಲೆಯಲ್ಲಿ ಎರಡು ವರ್ಷಗಳಿಂದ ನೇಮಕಾತಿ ನಡೆಸಿರಲಿಲ್ಲ
ಹೀಗಾಗಿ ತರಬೇತಿ ಪಡೆದುಕೊಂಡು ನಾವು ಸೇನಾ ನೇಮಕಾತಿ ಪರೀಕ್ಷೆಗಾಗಿ ಕಾಯುತ್ತಿದ್ದೇವೆ.
ಆದರೇ ಸರ್ಕಾರ ಈಗ ಅಗ್ನಿಪಥ್ ಯೋಜನೆ ರೂಪಿಸಿ ಅದರ ಅನ್ವಯ ಎಲ್ಲರನ್ನೂ ನೇಮಕಾತಿ ಮಾಡುತ್ತೇವೆ ಎಂದು ಹೇಳುವುದು ಸರಿಯಲ್ಲ ಎಂದು ಕಿಡಿಕಾರಿದರು.
ತರಬೇತಿ ಪಡೆಯುತ್ತಿದ್ದ ಹಾಗೂ ಪಡೆದು ಪರೀಕ್ಷೆಗಾಗಿ ಕಾಯುತ್ತಿದ್ದ ವಿದ್ಯಾರ್ಥಿಗಳನ್ನು ಸೇನಾ ನೇಮಕಾತಿಯ ಪರೀಕ್ಷೆ ಕರೆದು ಆಯ್ಕೆ ಪ್ರಕ್ರಿಯೆ ಮುಗಿಸಬೇಕು ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.
ಧಾರವಾಡದಲ್ಲಿ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗುತ್ತಿದ್ದಂತೆ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ.
ಇದರಿಂದಾಗಿ ಆತಂಕಗೊಂಡ ಕೆಲ ಯುವಕರು ಗಾಬರಿಯಾಗಿ ಎದ್ದನೋ ಬಿದ್ದನೋ ಅಂತ ಅಲ್ಲಿಂದ ಕಾಲು ಕಿತ್ತಿದ್ದಾರೆ.
ಇನ್ನೂ ಕೆಲವರು ಅಕ್ಕ ಪಕ್ಕದ ಕಾಂಪೌಂಡ್ ಜಿಗಿದ್ದು ಚೆಲ್ಲಾಪಿಲ್ಲಿಯಾದರು. ಪೊಲೀಸರು ತಮ್ಮ ಲಾಠಿ ರುಚಿ ತೋರಿಸಿದರು.
ಅಲ್ಲದೆ, ಕೆಲವರನ್ನು ವಶಕ್ಕೆ ಪಡೆದುಕೊಂಡ ಪೊಲೀಸರು ವಿಚಾರಣೆ ನಡೆಸಲು ಮುಂದಾಗಿದ್ದಾರೆ.
ಧಾರವಾಡದ ಜಿಲ್ಲಾ ನ್ಯಾಯಾಲಯದ ಸರ್ಕಲ್ ಬಳಿ ಜಮಾವಣೆಯಾಗಿದ್ದು,ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯ ಪೊಲೀಸರ ನಿಯೋಜನೆ ಮಾಡಲಾಗಿದೆ