ಧಾರವಾಡ prajakiran.com : ಧಾರವಾಡ ಜಿಲ್ಲೆಯ ನವಲಗುಂದ, ಹುಬ್ಬಳ್ಳಿ, ಅಣ್ಣಿಗೇರಿ, ಕುಂದಗೋಳ, ಕಲಘಟಗಿ, ಅಳ್ನಾವರ ಹಾಗೂ ಧಾರವಾಡ ತಾಲ್ಲೂಕಿನಲ್ಲಿ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ೨೦೧೯-೨೦ ರ ಮುಂಗಾರಿನಲ್ಲಿ ವಿಮಾ ತುಂಬಿದ ಹತ್ತಿ, ಹೆಸರು, ಮೆಣಸಿನಕಾಯಿ, ಈರುಳ್ಳಿ, ಮೆಕ್ಕೆಜೋಳ ಸೇರಿದಂತೆ ವಿವಿಧ ಬೆಳೆ ಬೆಳೆದ ರೈತರು ಕಳೆದ ವರ್ಷ ಅತಿವೃಷಿಯಿಂದ ಬೆಳೆ ಹಾನಿಯಾಗಿ ಈ ಸಲ ಕೊರೋನಾದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ.
ವಿಮಾ ಕಂಪನಿಯವರು ರೈತರಿಂದ ಬೆಳೆವಿಮೆ ತುಂಬಿಸಿಕೊಳ್ಳಲು ದಿನಾಂಕವನ್ನು ನಿಗದಿ ಮಾಡಿ ಹಣ ತುಂಬಿಸಿಕೊಳ್ಳುತ್ತಾರೆ.
ಆದರೆ ಬೆಳೆಹಾನಿಯಾಗಿ ೧ ವರ್ಷ ಕಳೆದರೂ ಇಲ್ಲಿಯವರೆಗೂ ಆ ರೈತರಿಗೆ ವಿಮಾ ಕಂಪನಿಗಳಿಂದ ಸೂಕ್ತ ಬೆಳೆವಿಮೆ ದೊರಕಿದಿರುವುದು ದುರಂತದ ಸಂಗತಿ.
ವಿಮೆ ತುಂಬಲು ಕೊನೆ ದಿನಾಂಕ ನಿಗದಿಪಡಿಸಿದ ರೀತಿಯಲ್ಲಿಯೇ ಪರಿಹಾರ ವಿತರಿಸಲು ದಿನಾಂಕವನ್ನು ಕೇಂದ್ರ ಸರಕಾರ ವಿಮ ಕಂಪನಿಗೆ ನಿಗದಿಪಡಿಸಬೇಕು
೨೦೧೯-೨೦ ರ ಬೆಳೆವಿಮೆಯನ್ನು ತಕ್ಷಣ ರೈತರ ಖಾತೆಗಳಿಗೆ ಜಮಾ ಮಾಡಬೇಕೆಂದು ನವಲಗುಂದ ಮಾಜಿ ಶಾಸಕ ಹಾಗೂ ಜೆ.ಡಿ.ಎಸ್. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎನ್.ಹೆಚ್. ಕೋನರಡ್ಡಿ ಅವರು ಧಾರವಾಡ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.