ಅಪರಾಧ

ಧಾರವಾಡ : ಹೆಂಡತಿ ತಂಗಿಯನ್ನೇ ಅಪಹರಿಸಲು ಸುಪಾರಿ ನೀಡಿದ್ದ ಭೂಪ ಅಂದರ್…..!

ಧಾರವಾಡ prajakiran.com : ಹೆಂಡತಿ ತಂಗಿಯ ಮೇಲೆ ಕಣ್ಣು ಹಾಕಿದ ಭೂಪನೊಬ್ಬ   ಆಕೆಯನ್ನು ಅಪಹರಿಸಲು 10 ಲಕ್ಷಕ್ಕೆ ಸುಪಾರಿ ನೀಡಿದ್ದ ಪ್ರಕರಣ ಧಾರವಾಡದಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಈ ಪ್ರಕರಣದ ಜಾಎಉ ಹಿಡಿದು ತನಿಖೆ ನಡೆಸಿದ ಧಾರವಾಡ ಶಹರ ಠಾಣೆ ಪೊಲೀಸರು  ಅದರ ಜಾಲ‌ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅಚ್ಚರಿ ಹಾಗೂ ದುರಂತದ ಸಂಗತಿಯೆಂದರೆ ಈತ ಕುಂದಗೋಳದ ಸಿಡಿಪಿಓ ಕಚೇರಿಯಲ್ಲಿ ಎಫ್ ಡಿಎ ನೌಕರನಾಗಿದ್ದಾನೆ.

ಈತನ ಹೆಸರು ಮಕ್ತುಂ ಅಲಿ ಟೋಪದಾರ (35) ಎಂಬ ವ್ಯಕ್ತಿ ಈಗಾಗಲೇ ಮದುವೆಯಾಗಿದ್ದು, ತನ್ನ ಹೆಂಡತಿಯ ತಂಗಿಯನ್ನು ಸಹ  ಮದುವೆಯಾಗಲು ಇಂತಹ ಮನೆಹಾಳು ಐಡಿಯಾ ಮಾಡಿರುವುದು ಬಯಲಿಗೆ ಬಂದಿದೆ.

ಈತ ಪ್ರವೀಣ ನಾಯ್ಕ್ (25) ಹಾಗೂ ಚೇತನ್ ಹಡಪದ ಎಂಬುವವರಿಗೆ 10 ಲಕ್ಷಕ್ಕೆ ಸುಪಾರಿ ನೀಡಿರುವುದು ವಿಚಾರಣೆ ವೇಳೆ ಹೊರಬಿದ್ದಿದ್ದು ಈಗಾಗಲೇ ಇಬ್ಬರಿಗೂ ಮಕ್ತುಂ ಅಲಿ ಟೋಪದಾರ 5 ಲಕ್ಷ ಮುಂಗಡ ಹಣ  ನೀಡಿದ್ದ ಎಂದು ಬಾಯಿ ಬಿಟ್ಟಿದ್ದಾರೆ.

ಈ ಸಂಬಂಧ ಮಕ್ತುಂ ಅಲಿ ಟೋಪದಾರ ಹೆಂಡತಿ ನಾಜಿಯಾಬಾನು ಧಾರವಾಡ ಶಹರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದರು.

ಆ ದೂರಿನ ಆಧಾರದ ಮೇರೆಗೆ ಮಹತ್ವದ ದಾಖಲೆಗಳನ್ನು ಕಲೆ ಹಾಕಿದ ಧಾರವಾಡ ಶಹರ ಠಾಣೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *