ಅಂತಾರಾಷ್ಟ್ರೀಯ

ಧಾರವಾಡ ಕೆ ಐ ಎ ಡಿ ಬಿಯ ಪರಿಹಾರ ಗೋಲ್ ಮಾಲ್ : ತಂದೆಗೆ ಗೊತ್ತಿಲ್ಲದ ಹಾಗೆಯೇ 64 ಲಕ್ಷ ಡ್ರಾ ಮಾಡಿದ್ದ ಮಗ ಸಿಐಡಿ ಬಲೆಗೆ….!

ತಂದೆಗೆ ಗೊತ್ತಿಲ್ಲದ ಹಾಗೆಯೇ
ಕೆ ಐ ಎ ಡಿ ಬಿಯ 64 ಲಕ್ಷ ಡ್ರಾ ಮಾಡಿದ್ದ ಮಗ ಸಿಐಡಿ ಬಲೆಗೆ

ಎರಡು ಎಕರೆ ಆರು ಗುಂಟೆ ಜಮೀನಿನ ಮೇಲೆ ಎರಡನೇಯ ಬಾರಿಗೆ ಪರಿಹಾರ ಪಡೆದಿದ್ದ ಭೂಪ

ತಂದೆಗೆ ಮೋಸ ಮಾಡಿದ್ದ ಮಗ ಇದೀಗ ಸಿಐಡಿಯ ಮೂರನೇ ಬಂಧಿತ ಆರೋಪಿ

14 ಜನರ ನಿರೀಕ್ಷಣಾ ಜಾಮೀನು ಅರ್ಜಿ ವಜಾ ಮಾಡಿದ ಹೈಕೋರ್ಟ್

ಧಾರವಾಡ ಪ್ರಜಾಕಿರಣ.ಕಾಮ್ : ಧಾರವಾಡದ ಕೆ ಐ ಎ ಡಿ ಬಿ ಯಲ್ಲಿ ರೈತರ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಕೋಟ್ಯಾಂತರ ರೂಪಾಯಿ ಅವ್ಯವಹಾರ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ಬ್ಯಾಂಕ್ ಮ್ಯಾನೇಜರ್ ಹಾಗೂ ಕ್ಲರ್ಕ್ ಸೇರಿ ಇಬ್ಬರ ಬಂಧನದ ಬೆನ್ನಲ್ಲೇ
ತಂದೆಗೆ ಗೊತ್ತಿಲ್ಲದ ಹಾಗೆಯೇ
ಕೆ ಐ ಎ ಡಿ ಬಿಯ 64 ಲಕ್ಷ ಡ್ರಾ ಮಾಡಿದ್ದ ಮಗನನ್ನು ಸಿಐಡಿ ಬಲೆಗೆ ಕೆಡವಿದೆ.

ಬಂಧಿತ ಆರೋಪಿಯನ್ನು ಮೆಹಬೂಬ್‌ ಸುಭಾನಿ ಎಂದು ಗುರುತಿಸಲಾಗಿದೆ.

ಎರಡು ಎಕರೆ ಆರು ಗುಂಟೆ ಜಮೀನಿನ ಮೇಲೆ ಮೊದಲ ಬಾರಿಗೆ ತಂದೆ ಇಮಾಮ್ ಸಾಬ ಶಿರೂರ್ ಪರಿಹಾರ ಪಡೆದಿದ್ದ. ಆದರೆ, ಎರಡನೇಯ ಬಾರಿಗೆ ತಂದೆಗೆ ಗೊತ್ತಾಗದಂತೆ ಮಗ
ಧಾರವಾಡದ ಕೋಟೂರಿನ ಬ್ಯಾಂಕ್‌ನಿಂದ ಡ್ರಾ ಮಾಡಿದ್ದ.

ತಂದೆಗೆ ಮೋಸ ಮಾಡಿದ್ದ ಮಗನನ್ನು ಇದೀಗ ಸಿಐಡಿಯು ಮೂರನೇ ಆರೋಪಿಯನ್ನಾಗಿಸಿ ಬಂಧಿಸಿ ಕಂಬಿಯ ಹಿಂದೆ ತಳ್ಳಿದೆ.

ಇದೇ ವೇಳೆ ಕೆ ಐ ಎ ಡಿ ಬಿಯ ಕೋಟ್ಯಾಂತರ ರೂಪಾಯಿ ಅವ್ಯವಹಾರಕ್ಕೆ ಸಂಬಂಧಿಸಿದಂತೆ ನಿವೃತ್ತ ವಿಶೇಷ ಭೂ ಸ್ವಾಧೀನ ಅಧಿಕಾರಿ ವಿ.ಡಿ. ಸಜ್ಜ‌ನ, ಮ್ಯಾನೇಜರ್ ಎಂ.ಕೆ. ಸಿಂಪಿ, ಹಿರಿಯ ಸಹಾಯಕ ಶಂಕರ್ ತಳವಾರ, ಗುತ್ತಿಗೆ ನೌಕರ ಹೇಮಚಂದ್ರ ಚಿಂತಾಮಣಿ ಸೇರಿದಂತೆ 14 ಜನರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾ ಮಾಡಿ ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ‌.

ನಿವೃತ್ತ ವಿಶೇಷ ಭೂಸ್ವಾಧೀನಾಧಿಕಾರಿ ವಿ.ಡಿ. ಸಜ್ಜನ ಜೊತೆಗೆ ಗುರುತಿಸಿಕೊಂಡು ಆತನ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಲಕ್ಷೇಶ್ವರ ಮೂಲದ ದತ್ತಾತ್ರೇಯ ಈ ಮೆಹಬೂಬ್‌ ಸುಭಾನಿಗೆ ಸಹಕಾರ ನೀಡಿದ್ದ.

ರೈತ ಇಮಾಮ್‌ಸಾಬ್‌ ಶಿರೂರ್‌ನ ಹೆಸರಿನಲ್ಲಿ ಪ್ರಕರಣ ದಾಖಲಾಗಿತ್ತು.

ಸಿಐಡಿ ತನಿಖೆಯಲ್ಲಿ ಈ ರಹಸ್ಯ ಬಯಲಾಗಿದೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *