ಧಾರವಾಡ prajakiran.com : ಕೇಂದ್ರ ಸರಕಾರಿ ನೌಕರಿ ಕೊಡಿಸುವುದಾಗಿ ಹಾವೇರಿಯ 44 ಯುವಕರಿಂದ ಕೋಟ್ಯಾಂತರ ರೂಪಾಯಿ ಪಡೆದಿದ್ದ ಕಮಲಾಪುರದಲ್ಲಿರುವ ಎಸ್ ಜಿ ಎಸ್ ಎಸ್ ಕನ್ಸಟೆನ್ಸಿಯ ರಾಘವೇಂದ್ರ ಕಟ್ಟಿ ಹಾಗೂ ಪೂರ್ಣಿಮಾ ಸೊಪ್ಪಿಮಠರನ್ನು
ಧಾರವಾಡದ ಉಪನಗರ ಠಾಣೆ ಪೊಲೀಸರು ಕೊನೆಗೂ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಳೆದ ಹಲವು ದಿನಗಳಿಂದ ಪೊಲೀಸರ ಕಣ್ಣು ತಪ್ಪಿಸಿ ಅಡ್ಡಾಡುತ್ತಿದ್ದ ಅವರನ್ನು ಬಂಧಿಸಲು ಪೊಲೀಸರು ಬೆಳಗಾವಿ, ಗೋವಾ, ಬೆಂಗಳೂರು ಅಲೆದಾಡಿದ್ದರು.
ಕೊನೆಗೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿ ಬಲೆಗೆ ಕೆಡವಿದ್ದರು.
ಬಳಿಕ ಠಾಣೆಗೆ ಕರೆತಂದು ವಿಚಾರಣೆ ನಡೆಸಿ, ವೈದ್ಯಕೀಯ ಪರೀಕ್ಷೆ ಬಳಿಕ ಧಾರವಾಡದ
ಪ್ರಧಾನ ಸಿಜೆ ಹಾಗೂ ಜೆ ಎಂ ಎಫ್ ಸಿ ನ್ಯಾಯಾಲಯದ ಎದುರು ಹಾಜರು ಪಡಿಸಿದರು.
ಎಸ್ ಜಿ ಎಸ್ ಎಸ್ ಹೆಚ್ ಆರ್ ಕನ್ಸಟೆನ್ಸಿಯ ರಾಘವೇಂದ್ರ ಕಟ್ಟಿ ಹಾಗೂ ಪೂರ್ಣಿಮಾ ಸೊಪ್ಪಿಮಠ ಅವರನ್ನು
ನ್ಯಾಯಾಧೀಶ ಅಚ್ಚಪ್ಪ ದೊಡ್ಡಬಸವರಾಜ ಅವರ ಎದುರು ಹಾಜರು ಪಡಿಸಲಾಯಿತು.
ನ್ಯಾಯಾಧೀಶರು ಇಬ್ಬರು ಆರೋಪಿಗಳನ್ನು
ಏ. 4 ರ ವೆರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು.
ಬಂಧನದ ವಿಷಯ ತಿಳಿದು ಮಾಧ್ಯಮದ ವರೊಂದಿಗೆ ಮಾತನಾಡಿದ ಜನಜಾಗೃತಿ ಸಂಘ ದ ಅಧ್ಯಕ್ಷ ಬಸವರಾಜ ಕೊರವರ, ಇದು ನಮ್ಮ ಹೋರಾಟಕ್ಕೆ ಸಿಕ್ಕ ಪ್ರಾಥಮಿಕ ಹಂತದ ಜಯವಾಗಿದೆ. ಸ್ಥಳೀಯ ಉಪನಗರ ಪೊಲೀಸರು ಆರೋಪಿಯನ್ನು ಬಂಧಿಸಲು ಒಂದು ವಾರ ಕಾಲಾವಕಾಶ ತೆಗೆದುಕೊಂಡರು.
ಎಲ್ಲೋ ಅವರು ಪ್ರಭಾವಕ್ಕೆ ಒಳಗಾಗಿದ್ದಾರೆ ಎಂದು ಅನಿಸುತ್ತಿದೆ. ಅಲ್ಲದೆ, ಹಣ ಕಳೆದುಕೊಂಡವರು ಪೊಲೀಸ್ ಠಾಣೆಗೆ ಬಂದರೆ ನಿಮ್ಮೂರಿನ ಪೊಲೀಸರ ಬಳಿ ಹೋಗಿ ಎಂದು ಸಾಗು ಹಾಕುತ್ತಿದ್ದಾರೆ.
ಹೀಗಾಗಿ ಈ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಬೇಕು. ಈ ಸಂಸ್ಥೆ ರಾಜ್ಯದ ವಿವಿಧ ಜಿಲ್ಲೆ ಹಾಗೂ ಹೊರ ರಾಜ್ಯಗಳಾದ ಆಂಧ್ರ, ಗೋವಾ, ಮಹಾರಾಷ್ಟ್ರದಲ್ಲಿ ಕೂಡ ಸಾವಿರಾರು ಯುವಕರಿಗೆ ಕೇಂದ್ರ ಸರ್ಕಾರಿ ನೌಕರಿ ಕೊಡಿಸುವುದಾಗಿ ವಂಚಿಸಿದೆ.
ಈಗಾಗಲೇ ಒಂದು ಪ್ರಕರಣದಲ್ಲಿ
ಉಫನಗರ ಪೊಲೀಸರು ಬಿ ರಿಪೋರ್ಟ್ ಹಾಕಿದ್ದಾರೆ. ಒಂದು ಪ್ರಕರಣದಲ್ಲಿ ಬಂಧನ ವಿಳಂಬವಾದ ಹಿನ್ನೆಲೆಯಲ್ಲಿ ಜಾಮೀನು ದೊರೆಯುವಂತೆ ಆಯಿತು.
ಇನ್ನುಳಿದ ಎರಡು ಪ್ರಕರಣದಲ್ಲಿ ನೋಂದವರಿಗೆ ನ್ಯಾಯ ಹಾಗೂ ಕಳೆದುಕೊಂಡ ಹಣ ಮರಳಿ ಸಿಗಬೇಕು ಎಂದರೆ ಸರ್ಕಾರ ಈ ಪ್ರಕರಣವನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ಹಣ ಕಳೆದುಕೊಂಡ ಸಾವಿರಾರು ಯುವಕರ ಪರವಾಗಿ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳುವ ಮೂಲಕ ಎಳೆ ಎಳೆಯಾಗಿ ತನಿಖೆ ನಡೆಸಿ ನೋಂದ ಬಡ ಹಾಗೂ ಕೇಂದ್ರ ಸರಕಾರಿ ನೌಕರಿ ಆಸೆಗೆ ಬಿದ್ದ ಸಾಲ ಸೂಲ ಮಾಡಿ ಹಣ ಕಳೆದುಕೊಂಡ ರೈತ ಕುಟುಂಬದ ಸದಸ್ಯರಿಗೆ ಅವರ ಹಣವನ್ನು ಮರಳಿಸುವಂತಾಗಬೇಕಾದರೆ ಸಿಐಡಿ ತನಿಖೆ ನಡೆಸಲೇಬೇಕು ಎಂದು ಜನಜಾಗೃತಿ ಸಂಘ ಅಧ್ಯಕ್ಷ ಬಸವರಾಜ ಕೊರವರ ಒತ್ತಾಯಿಸಿದರು.