ತಿರುವಂತಪುರಂ prajakiran.com : ಕೊರೋನಾ ಸೋಂಕಿತರ ಸಂಖ್ಯೆಯಲ್ಲಿ ಇಳಿಕೆಯಾಗದ ಕಾರಣ ಕೇರಳ ಸರ್ಕಾರ ಜೂನ್ 9ರ ವರೆಗೆ ಲಾಕ್ಡೌನ್ ವಿಸ್ತರಿಸುವುದಾಗಿ ಘೋಷಿಸಿದೆ.
ಕಳೆದ ಲಾಕ್ಡೌನ್ ನಿಮಗಳಿಗೆ ಹೋಲಿಸಿದರೆ ಈ ಭಾರಿ ಹಲವು ನಿಯಮಗಳನ್ನು ಸಡಿಲಗೊಳಿಸಿರುವ ಸರ್ಕಾರ ತೆಂಗಿನ ನಾರು ಮತ್ತು ಗೇರು ಉದ್ಯಮಗಳಿಗೆ ಸಡಿಲಿಕೆ ನೀಡಿದ್ದು, ಶೇ. 50ರಷ್ಟು ಸಿಬ್ಬಂದಿಯೊಂದಿಗೆ ಕಾರ್ಯನಿರ್ವಹಿಸಲು ಸೂಚಿಸಿದೆ.
ಜೂನ್ 9ರ ವರೆಗೆ ಲಾಕ್ಡೌನ್ ವಿಸ್ತರಣೆಗೊಳ್ಳಲಿದ್ದು, ಅಗತ್ಯ ಸೇವೆ ಹೊರತುಪಡಿಸಿ ಇನ್ನೆಲ್ಲಾ ಚಟುವಟಿಕೆಗಳಿಗೂ ಬ್ರೇಕ್ ಹಾಕಲಾಗಿದೆ.