ಧಾರವಾಡ prajakiran.com : ವಿದ್ಯಾನಗರಿ ಧಾರವಾಡ ಜಿಲ್ಲೆಯಾದ್ಯಂತ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಸಾಗಿರುವ ಕರೋನಾ ಅಟ್ಟಹಾಸ ಇದೀಗ ನಗರದ ಇಬ್ಬರು ಪತ್ರಕರ್ತರಿಗೂ ವ್ಯಾಪಿಸಿದೆ.
ರಾಜ್ಯ ಮಟ್ಟದ ಪತ್ರಿಕೆಯ ಹಿರಿಯ ವರದಿಗಾರ ಹಾಗೂ ಹಿರಿಯ ಉಪಸಂಪಾದಕರಿಗೂ ವಕ್ಕರಿಸಿದೆ. ಇದಲ್ಲದೆ, ಅವರ ಜೊತೆಗೆ ಕಾರ್ಯ ನಿರ್ವಹಿಸುತ್ತಿದ್ದ ಜಾಹೀರಾತು ಪ್ರತಿನಿಧಿಗೂ ಕರೋನಾ ಕಂಟಕ ತಗುಲಿದೆ.
ಇದರಿಂದಾಗಿ ಇಬ್ಬರು ಹಿರಿಯ ಪತ್ರಕರ್ತರು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರೆ, ಒಬ್ಬರು ಹೋಂ ಐಸೋಲೇಶನ್ ನಲ್ಲಿದ್ದಾರೆ.
ಇದು ಧಾರವಾಡ ಜಿಲ್ಲೆಯ ಪತ್ರಕರ್ತರನ್ನು ಬೆಚ್ಚಿ ಬೀಳಿಸಿದ್ದು, ಆತಂಕ ಮೂಡಿಸಿದೆ. ಅವರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕರು ಇದೀಗ ಸ್ವಯಂ ಪ್ರೇರಿತವಾಗಿ ತಪಾಸಣೆ ಮಾಡಿಸಿಕೊಳ್ಳಲು ಮುಂದಾಗಿದ್ದಾರೆ. ಅಲ್ಲದೆ, ಕೆಲವರು ಹೋಂ ಕ್ವಾರಂಟಿನ್ ಆಗಲು ಸಿದ್ದರಾಗಿದ್ದಾರೆ ಎಂದು ತಿಳಿದುಬಂದಿದೆ.