ಧಾರವಾಡ prajakiran.com : ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿ ರಮೇಶ ಜಾರಕಿಹೊಳಿ ಓಡಾಟ ವಿಚಾರ ಕುರಿತು ಧಾರವಾಡದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿಕೆ ನೀಡಿದ್ದಾರೆ.
ಸಚಿವ ಜಾರಕಿಹೊಳಿ ನನ್ನ ಬಳಿಯೂ ಬಂದಿದ್ದರು.
ಆದರೆ ಕೇವಲ 3-4 ನೀರಾವರಿ ಯೋಜನೆ ಬಗ್ಗೆ ಮಾತನಾಡಲು ಬಂದಿದ್ದರು.
ಯೋಜನೆಗಳಿಗೆ ಭಾರತ ಸರ್ಕಾರದ ಸಹಾಯ ಕೇಳಲು ಬಂದಿದ್ದರು.
ಅಷ್ಟನ್ನೇ ನಾವು ಮಾಡಿದ್ದೇವೆ.
ಉಳಿದಿದ್ದು ಗೊತ್ತಿಲ್ಲ.
ಜಾರಕಿಹೊಳಿ ಇನ್ನು ದೆಹಲಿಯಲ್ಲಿದಾರಂತೆ.
ನಾನು ಮೊನ್ನೆಯೇ ದೆಹಲಿ ಬಿಟ್ಟಿರುವೆ ಎಂದು ನುಣುಚಿಕೊಂಡರು.
ಗುಪ್ಕಾರ್ ಗ್ಯಾಂಗ್ ದೇಶದ್ರೋಹಿ ಚಟುವಟಿಕೆ ಹಿನ್ನೆಲೆ ಕಾಶ್ಮೀರದಲ್ಲಿ ಉಗ್ರರ ಪಡೆಯನ್ನು ರಕ್ಷಣಾ ಪಡೆಗಳು ಹೊಡೆದುರುಳಿಸಿವೆ.
ಇಂತಹ ದೇಹದ್ರೋಹಿ ಚಟಿವಟಿಕೆಗಳ ಹಿಂದೆ ಗುಪ್ಕಾರ್ ಗ್ಯಾಂಗ್ ಕುಮ್ಮಕ್ಕಿದೆ.
ಈ ಗ್ಯಾಂಗ್ ಜೊತೆಗಿರುವ ಪಕ್ಷಗಳ ಜೊತೆ ಕಾಂಗ್ರೆಸ್ ಕೈ ಜೋಡಿಸಿದೆ ಎಂದು ಆರೋಪಿಸಿದರು.
ಗುಪ್ಕಾರ್ ಜೊತೆಗಿನ ಸಂಬಂಧದ ಬಗ್ಗೆ ಕಾಂಗ್ರೆಸ್ ಸ್ಪಷ್ಟ ಪಡಿಸಬೇಕು.
ಏ ರಿಸ್ತಾ ಕ್ಯಾ ಕೆಹಲಾತಾ ಹೈ ಎಂಬುದರ ಕುರಿತು ಬಾಯಿ ಬಿಡಬೇಕು.
ತಾಯಿಗೆ ಆರಾಮ ಇಲ್ಲ ಅಂತಾ ರಾಹುಲ್ ಗೋವಾದಲ್ಲಿ ಕುಳಿತಿದಾರೆ.
ಅಲ್ಲಿಂದ ಬಂದು ರಾಹುಲ್ ನಿಲುವು ಸ್ಪಷ್ಟಪಡಿಸಬೇಕು ಎಂದು ಸವಾಲು ಹಾಕಿದರು.
ಗೋವಾ ಬಿಟ್ಟು ಬಂದು ಕಾಂಗ್ರೆಸ್ ಸಭೆ ಮಾಡಿ ನಿಲುವು ಸ್ಪಷ್ಟಪಡಿಸಿ ಎಂದ ಕೇಂದ್ರ ಸಚಿವ ಜೋಶಿ
ಅಸಹಿಷ್ಣುತೆ ಬಗ್ಗೆ ಮಾತನಾಡಿದವರು ಗುಪ್ಕಾರ ಬಗ್ಗೆ ಮಾತನಾಡುತ್ತಿಲ್ಲ
ಅವಾರ್ಡ್ ವಾಪಸಿ ಗ್ಯಾಂಗ್ ಈ ಬಗ್ಗೆ ಹೇಳಲಿ.
ಸಾಕ್ಷಿ ಇದ್ದರೆ ಗುಪ್ಕಾರ್ ಗ್ಯಾಂಗ್ ಖಂಡಿಸಿ ಎಂದರು.