ಬೆಂಗಳೂರು prajakiran.com : ಹುಬ್ಬಳ್ಳಿ-ಧಾರವಾಡ ಅವಳಿನಗರದ ದಕ್ಷ ಡಿಸಿಪಿ ಕೆ.ರಾಮರಾಜನ್ ಅವರನ್ನು ಎತ್ತಂಗಡಿ ಮಾಡಿ, ರಾಜ್ಯದ ಬಿಜೆಪಿ ಸರಕಾರ ಆದೇಶ ಹೊರಡಿಸಿದೆ.
ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿಯಾಗಿದ್ದ ಕೆ.ರಾಮರಾಜನ್ ಅವರಿಗೆ ಬೆಂಗಳೂರು ನಗರ ಕಮಾಂಡ್ ಸೆಂಟರ್ ಗೆ ವರ್ಗಾವಣೆ ಮಾಡಲಾಗಿದೆ.
ಅವರ ಸ್ಥಳಕ್ಕೆ ನೂತನ ಡಿಸಿಪಿಯಾಗಿ ಸಾಹಿಲ್ ಭಾಗ್ಲಾ ಅವರನ್ನ ವರ್ಗಾವಣೆ ಮಾಡಲಾಗಿದೆ.
ಸಾಹಿಲ್ ಬಾಗ್ಲಾ ಅವರು ಈ ಹಿಂದೆ ಬೆಂಗಳೂರು ಸಿಐಡಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು.
ಕಳೆದ ರಾತ್ರಿ ವರ್ಗಾವಣೆ ಆದೇಶ ಬಂದಿದ್ದು, ಇಂದು ಕೆ.ರಾಮರಾಜನ್ ತಮ್ಮ ಅಧಿಕಾರ ಹಸ್ತಾಂತರ ಮಾಡಲಿದ್ದಾರೆ ಎನ್ನಲಾಗಿದೆ.
ಅವಳಿನಗರದಲ್ಲಿ ತಮ್ಮದೇ ಆದ ಹವಾ ಹೊಂದಿದ್ದ ಕೆಲಸದ ವಿಷಯದಲ್ಲಿ ಬಿಜೆಪಿ ಮುಖಂಎರಿಗೂ ಕ್ಯಾರೆ ಎನ್ನದೆ ದಕ್ಷತೆಯಿಂದ ಕಾರ್ಯನಿರ್ವಹಣೆ ಮಾಡುವಲ್ಲಿ ಕೆ.ರಾಮರಾಜನ್ ಯಶಸ್ವಿಯಾಗಿದ್ದರು.
ಕಳೆದ ತಿಂಗಳಷ್ಟೇ ನವನಗರದ ಪೊಲೀಸ್ ಠಾಣೆಯಲ್ಲಿ ಮತಾಂತರ ವಿಷಯಕ್ಕೆ ಸಂಬಂಧಿಸಿದಂತೆ ಡಿಸಿಪಿ ವಿರುದ್ಧ ಆಡಳಿತ ಪಕ್ಷದವರು ಹರಿಹಾಯ್ದಿದ್ದ ವೀಡಿಯೋ ವೈರಲ್ ಆಗಿತ್ತು.
ಅದಾದ ಬೆನ್ನಲ್ಲೇ ನೂರಾರು ಜನರ ವಿರುದ್ದ ಪ್ರಕರಣ ದಾಖಲಿಸಿದ್ದ ಡಿಸಿಪಿಯನ್ನ ವರ್ಗಾವಣೆ ಮಾಡಲಾಗಿದೆಯೇ ಎಂಬ ಅನುಮಾನ ಅವಳಿನಗರದ ಜನತೆಗೆ ಮೂಡಿಸಿದೆ.