ಧಾರವಾಡ prajakiran.com : ಮೈಸೂರಿನ ಹುಚ್ಚು ಗಣಿ ಮಹದೇವಮ್ಮನ ದೇವಾಲಯದ ಧ್ವಂಸ ಖಂಡಿಸಿ ಧಾರವಾಡದ ಜಿಲ್ಲಾಧಿಕಾರಿ ಕಚೇರಿ ಎದುರು ಹಿಂದೂ ಜಾಗರಣ ವೇದಿಕೆ ಸದಸ್ಯರು ಪ್ರತಿಭಟನೆ ನಡೆಸಿದರು.
ದೇವಾಲಯ ತೆರವುಗೊಳಿಸಿದ ಅಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸಬೇಕು. ಹಾಗೂ ಅವರ ಹಿಂದೂ ಸಮಾಜದ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
ಅಲ್ಲದೆ, ಅದೇ ಸ್ಥಳದಲ್ಲಿ ದೇವಾಲಯ ಪುನರ್ ನಿರ್ಮಾಣ ಮಾಡಬೇಕು. ಜೊತೆಗೆ ರಾಜ್ಯದ ಯಾವುದೇ ದೇವಾಲಯಗಳನ್ನು ತೆರವುಗೊಳಿಸುವ ಕಾರ್ಯಕ್ಕೆ ಮುಂದಾಗಬಾರದು ಎಂದು ಆಗ್ರಹಿಸಿದರು.
ಈ ಪ್ರತಿಭಟನೆಯಲ್ಲಿ ಹಿಂದೂ ಜಾಗರಣ ವೇದಿಕೆಯ ಜಯತೀರ್ಥ ಮಳಗಿ, ಧಾರವಾಡ ಜಿಲ್ಲೆಯ ಪ್ರಮುಖ ವಿಜಯಕುಮಾರ್ ಕೊಳ್ಳಾನಟ್ಟಿ, ಅಜಯಕುಮಾರ್ ಕೊಳ್ಳಾನಟ್ಟಿ, ರವಿ ಶಿಂಧೆ, ವಿನಾಯಕ ಜೋಶಿ, ಮಙಜುನಾಥ ಹಂಚಿನಮನಿ, ಆತ್ಮಾನಂದ ಪಾಟೀಲ ಸೇರಿದಂತೆ ಹಲವಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.