ಮಂಗಳೂರು prajakiran.com : ಮಂಗಳೂರಿನ ಹೊರವಲಯದಲ್ಲಿರುವ ಗುರುಪುರ ಬಳಿ ಭಾನುವಾರ ಮಧ್ಯಾಹ್ನ ನಾಲ್ಕು ಮನೆಗಳ ಮೇಲೆ ಬಂಗ್ಲೆಗುಡ್ಡ ಕುಸಿದ ಪರಿಣಾಮ ಹಲವರು ಸಿಲುಕಿಕೊಂಡಿದ್ದಾರೆ.
ಇಬ್ಬರು ಮಕ್ಕಳ ರಕ್ಷಣಾ ಕಾರ್ಯ ನಡೆದಿದ್ದು, ಜೆಸಿಬಿ ಮೂಲಕ ತೆರವು ಕಾರ್ಯಾಚರಣೆ ನಡೆದಿದ್ದು, ಮತ್ತೆ ಮತ್ತೇ ಗುಡ್ಡ ಕುಸಿಯುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಸ್ಥಳೀಯರು, ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ರಕ್ಷಣಾ ಕಾರ್ಯ ಕೈಗೊಂಡಿದ್ದಾರೆ. ರಕ್ಷಣಾ ಕಾರ್ಯ ಸವಾಲಿನ ಕೆಲಸವಾಗಿದ್ದು, ಸಮರೋಪಾದಿಯಲ್ಲಿ ಕೆಲಸ ನಡೆದಿದೆ. ಈಗಾಗಲೇ ನಾಲ್ಕು ಮನೆ ಬಿದ್ದಿವೆ.
ಇನ್ನೂ ಎರಡು ಮನೆ ಕುಸಿಯುವ ಹಂತದಲ್ಲಿದೆ. ಅದರೊಳಗೆ ಇಬ್ಬರು ಮಕ್ಕಳು ಸಿಲುಕಿದ್ದಾರೆ. 15 ವರ್ಷದ ಮಗು ಹಾಗೂ 8 ವರ್ಷದ ಹೆಣ್ಣು ಮಗುವಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ನಿನ್ನೇ ಧಾರಾಕಾರವಾಗಿ ಸುರಿದ ಮಳೆಗೆ ಈ ಬಂಗ್ಲೆಗುಡ್ಡದಲ್ಲಿ ನಾಲ್ಕು ಮನೆ ಕುಸಿತ ಕುಸಿದಿವೆ. ಮಹ್ಮದ್ ಇಮಾಮ್ ಅವರ ಮನೆಯಲ್ಲಿ ಹತ್ತಾರು ಜನ ಇದ್ದರು ಎನ್ನಲಾಗಿದೆ.
ಬೀಗರು ಬಂದಿದ್ದರು. ಮನೆಯ ಕುಸಿಯುತ್ತಿದ್ದಂತೆ ಕೆಲವರು ಓಡಿ ಬಂದು ಪ್ರಾಣ ಉಳಿಸಿಕೊಂಡರೆ ಮಕ್ಕಳು ಸಿಕ್ಕಿ ಬಿದ್ದಿದ್ದಾರೆ ಎಂದು ಇಸ್ಮಾಯಿಲ್ ವಿವರಿಸಿದ್ದಾರೆ.