ಜಮ್ಮು ಮತ್ತು ಕಾಶ್ಮೀರ prajakiran.com : ಇಲ್ಲಿನ ಉಧಂಪುರ ಜಿಲ್ಲೆಯ ‘ಬಟ್ಟಲ್ ಬಲ್ಲಿಯನ್’ ಕೈಗಾರಿಕಾ ಪ್ರದೇಶದ ರಾಸಾಯನಿಕ ಕಾರ್ಖಾನೆಯಲ್ಲಿ ಅಗ್ನಿ ದುರಂತ ಸಂಭವಿಸಿದೆ.
ಧನುಕಾ ಅಗ್ರಿಟೆಕ್ ಲಿಮಿಟೆಡ್ ಕಾರ್ಖಾನೆಯಲ್ಲಿ ಗುರುವಾರ ತಡರಾತ್ರಿ 12.30ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದ್ದು, ಈ ಅವಘಢಕ್ಕೆ ನಿಖರ ಕಾರಣ ತಿಳಿದಿಲ್ಲ.
ಸ್ಥಳಕ್ಕೆ 8 ಅಗ್ನಿಶಾಮಕ ವಾಹನ ಧಾವಿಸಿದ್ದು, ಆದರೆ ಬೆಂಕಿ ನಿಯಂತ್ರಣ ಮೀರಿರುವ ಹಿನ್ನೆಲೆ ಬೆಂಕಿ ಆರಿಸಲು ವಾಯುಸೇನೆಗೆ ಕರೆ ನೀಡಲಾಗಿತ್ತು.
ಈ ಬಗ್ಗೆ ಐಎಎಫ್ ವಾರಂಟ್ ಅಧಿಕಾರಿ ದಲ್ಬೀರ್ ಎಸ್. ಬೆಹ್ಲ್ ಮಾಹಿತಿ ನೀಡಿದ್ದು, ‘ಬೆಂಕಿ ನಂದಿಸಲು ನಾವು ಎರಡು ಗಂಟೆಗಳಿಂದ ಪ್ರಯತ್ನಿಸುತ್ತಿದ್ದು, ಆದರೆ ನಿಯಂತ್ರಣಕ್ಕೆ ಬಂದಿಲ್ಲ’ ಎಂದಿದ್ದಾರೆ.
ಅಗ್ನಿ ಅವಘಡದಲ್ಲಿ ಯಾವುದೇ ಜೀವ ಹಾನಿಯಾಗಿರುವುದರ ಬಗ್ಗೆ ವರದಿಯಾಗಿಲ್ಲ. ಆದರೆ ಕಾರ್ಖಾನೆ ಕಟ್ಟಡ ಸಂಪೂರ್ಣ ನಾಶವಾಗಿದೆ ಎಂದು ತಿಳಿದುಬಂದಿದೆ.