ಬೆಂಗಳೂರು prajakiran.com : ಸ್ಯಾಂಡಲ್ ವುಡ್ ಡ್ರಗ್ಸ್ ಜಾಲದ ನಂಟು ಆರೋಪದ ಹಿನ್ನಲೆಯಲ್ಲಿ ನಟರಾದ ಅಕುಲ್ ಬಾಲಾಜಿ, ಸಂತೋಷ ಆರ್ಯನ್, ಮಾಜಿ ಶಾಸಕ ಆರ್. ವಿ. ದೇವರಾಜ್ ಪುತ್ರರಾಗಿರುವ ಪಾಲಿಕೆ ಮಾಜಿ ಸದಸ್ಯ ಯು.ವಿ. ದೇವರಾಜ್ ಅವರು ಶನಿವಾರ ಸಿಸಿಬಿ ವಿಚಾರಣೆಗೆ ಹಾಜರಾಗಿದ್ದಾರೆ.
ಸಿಸಿಬಿ ಮುಖ್ಯಸ್ಥ ಸಂಜೀವ್ ಪಾಟೀಲ್ ಹಾಗೂ ಎಸಿಪಿ ಗೌತಮ್ ಕುಮಾರ್ ಅವರು ಮೂವರು ಮೊಬೈಲ್ ವಶಕ್ಕೆ ಪಡೆದಿದ್ದು, ಅದರಲ್ಲಿನ ಮಾಹಿತಿ ಸಂಗ್ರಹಿಸಲು ಆರಂಭಿಸಿದ್ದಾರೆ.
ಮೂವರಿಗೆ ಗ್ರಿಲ್ ನಡೆಸುತ್ತಿರುವ ಸಿಸಿಬಿ ಪೊಲೀಸರು ಡ್ರಗ್ಸ್ ಪ್ರಕರಣದಲ್ಲಿ ಬಂಧಿತ ಎ 5 ಆರೋಪಿ ವೈಭವ್ ಜೈನ ಜೊತೆಗೆ ಭಾಗವಹಿಸಿದ್ದ ಆರ್.ವಿ. ದೇವರಾಜ್ ಪುತ್ರ ಯುವರಾಜ್ ಸಂಭಾಷಣೆ ನಡೆಸಿರುವುದು ತನಿಖೆ ವೇಳೆ ಬಯಲಿಗೆ ಬಂದಿದೆ.
ಇದಲ್ಲದೆ, ನಟ ಅಕುಲ್ ಬಾಲಾಜಿ ಅವರು ಮಂಗಳೂರಿನಲ್ಲಿ ಬಂಧಿತನಾಗಿರುವ ರಿಯಾಲಿಟಿ ಶೋ ಡ್ಯಾನ್ಸರ್ ಕಿಶೋರ್ ಶೆಟ್ಟಿ ಜೊತೆಗೆ ನಂಟು ಹೊಂದಿದ ಆರೋಪ ಎದುರಿಸುತ್ತಿದ್ದಾರೆ.
ಇನ್ನು ಸಂತೋಷ ಆರ್ಯನ್ ಅವರ ನಂಟಿನ ಕುರಿತು ಕೂಡ ಪೊಲೀಸರು ಜಾಡು ಹಿಡಿದು ತನಿಖೆ ಮುಂದುವರೆಸಿದ್ದಾರೆ.