ಜಿಲ್ಲೆ

ಧಾರವಾಡದಲ್ಲಿ ಕೊರೋನಾದಿಂದ‌ ತಂದೆ-ಮಗ ಸಾವು…..!

ಧಾರವಾಡ prajakiran.com : ಧಾರವಾಡದ ಹಿರಿಯ ವರ್ತಕ ರವೀಂದ್ರ ವಸ್ತ್ರದ ಹಾಗೂ ಅವರ ಮಗ ವಿಶ್ವನಾಥ ವಸ್ತ್ರದ ಕೊರೋನಾದಿಂದ ಸಾವನ್ನಪ್ಪಿದರು.

ಇದರಿಂದಾಗಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಡಿದೆ.

ಕೊರೊನಾದಿಂದ‌ ಒಂದೇ ದಿ‌ನ ತಂದೆ ಮಗ ಸಾವನ್ನಪ್ಪಿರುವುದು ಅವರಿಗೆ ದಿಕ್ಜೇ ತೋಚದಂತಾಗಿದೆ.

ಕುಟುಂಬದ ಇನ್ನಿಬ್ಬರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.

ಧಾರವಾಡದ ಅಕ್ಕಿಪೇಟೆಯಲ್ಲಿ ಕಳೆದ ಹಲವು ದಶಕಗಳಿಂದ ಕಿರಾಣಿ ಅಂಗಡಿ ನಡೆಸುತ್ತಿದ್ದ ತಂದೆ ರವೀಂದ್ರ ಹಾಗೂ ಮಗ ವಿಶ್ವನಾಥ ವಸ್ತ್ರದ ಧಾರವಾಡದ ಸನ್ಮತಿನಗರದ ನಿವಾಸಿಗಳು‌.

ನಿನ್ನೆ ಸಂಜೆ 6 ಗಂಟೆಗೆ ತಂದೆ‌ ರವೀಂದ್ರ ಸಾವನ್ನಪ್ಪಿದ್ದರೆ ಮಧ್ಯರಾತ್ರಿ ಎರಡಕ್ಕೆ ಮಗ ವಿಶ್ವನಾಥ ವಸ್ತ್ರದ  ಸಾವನ್ನಪ್ಪಿದ್ದಾನೆ.

ಕಳೆದ ಒಂದು ವಾರದ ಹಿಂದೆ 
ಮೊದಲು ಮಗನಿಗೆ ಕೊರೊನಾ ಬಂದಿತ್ತು.

ಬಳಿಕ ತಂದೆಗೆ ಕೊರೊನಾ ಬಂದಿದೆ.
ಇದರಿಂದಾಗಿ ತಂದೆ ರವೀಂದ್ರ ವಸ್ತ್ರದ (70) ಮಗ ವಿಶ್ವನಾಥ್ ವಸ್ತ್ರದ (45) ಇಬ್ಬರನ್ನೂ ಬೆಳಗಾವಿಯ ಕೆ ಎಲ್ ಇ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು.

ಆದರೆ ದುರಾದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೆ ತಂದೆ ಮಗ ಇಬ್ಬರು ಒಂದೇ ದಿನ ಸಾವನ್ನಪ್ಪಿದ್ದಾರೆ.

ಅವರಿಬ್ಬರು ಮಹಾಮಾರಿ ಕರೋನಾದಿಂದ ವಿಧಿವಶರಾಗಿರುವುದು ಧಾರವಾಡ ಜಿಲ್ಲೆಯ ಜನತೆ, ವ್ಯಾಪಾರಸ್ಥರು ಹಾಗೂ ವರ್ತಕರು ಅತಂಕಗೊಂಡಿದ್ದು, ಅವರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *