ರಾಜ್ಯ

ಬಡ ಕುಟುಂಬಕ್ಕೆ 10 ಸಾವಿರ ಪರಿಹಾರ ನೀಡಿ ಎಂದ ಡಿಕೆಶಿ

ಬೆಂಗಳೂರು Prajakiran.com : ಮುಖ್ಯಮಂತ್ರಿಯವರು ಕೋವಿಡ್ ಮೂರನೇ ಅಲೆಗೆ ಸಿದ್ಧರಾಗಿ ಎಂದು ಹೇಳಿದ್ದಾರೆ.

ಆದ್ರೆ ಮೊದಲು ಎರಡನೇ ಅಲೆಯಲ್ಲಿ ಸಾಯುತ್ತಿರುವ ಜನರನ್ನು ರಕ್ಷಣೆ ಮಾಡಿ.

ಅಲ್ಲದೆ ಎರಡನೇ ಅಲೆಯ ಕೋವಿಡ್ ಗೆ ಲಸಿಕೆಯನ್ನು ಒದಗಿಸಿ ಎಂದು ಬೆಂಗಳೂರಿನಲ್ಲಿ ಮಂಗಳವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿಕೆ ನೀಡಿದ್ದಾರೆ.

ಕೋವಿಡ್ ಲಸಿಕೆ, ಬೆಡ್, ಆಕ್ಸಿಜನ್ ಕುರಿತು ಸರ್ಕಾರಕ್ಕೆ ಗೊಂದಲ ಇದೆ.

ನಮಗೂ ಕೂಡ ಲಸಿಕೆ ನೋಂದಣಿ ಮಾಡಲು ಆನ್ ಲೈನ್ ನಲ್ಲಿ ಗೊಂದಲವಾಗುತ್ತಿದೆ.

ಇದಕ್ಕೆ ಒಂದು ಸರಿಯಾದ ನಿರ್ದಾರವನ್ನು ಸರ್ಕಾರ ಕೈಗೊಳ್ಳಬೇಕು ಎಂದಿದ್ದಾರೆ.

ಲಾಕ್ ಡೌನ್ ನಿಂದ ಜನರು ವಲಸೆ ಹೋಗುತ್ತಿದ್ದಾರೆ. ರಾಜ್ಯದಲ್ಲಿ ಲಾಕ್ ಡೌನ್ ನಿಂದ ಜನರು ಸಂಕಷ್ಟದಲ್ಲಿದ್ದಾರೆ.

ಪ್ರತಿ ಕುಟುಂಬಕ್ಕೂ 10 ಸಾವಿರ ಪರಿಹಾರ ನೀಡಬೇಕು. ಆ ನಂತರ ಯಾರೂ ವಲಸೆ ಹೋಗುವುದಿಲ್ಲ ಎಂದಿದ್ದಾರೆ.

ಇನ್ನು ರೈತರು ಕೂಡ ಸಂಕಷ್ಟದಲ್ಲಿದ್ದಾರೆ. ಕೃಷಿ ಸಚಿವರೇ ನೀವು ಎಪಿಎಂಸಿಗಳಿಗೆ ಹೋಗಿ ರೈತರ ಕಷ್ಟ ಏನು ಎಂಬುದನ್ನು ತಿಳಿದುಕೊಂಡು ಪರಿಹಾರ ನೀಡುವ ಕೆಲಸ ಮಾಡಿ ಎಂದಿದ್ದಾರೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *