ಧಾರವಾಡ prajakiran.com : ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಧಾರವಾಡ ತಾಲೂಕಿನ ಹಳೇ ತೇಗೂರ ಗ್ರಾಮದ ಜನರಿಗೆ ಕೆಲಸ ನೀಡಬೇಕು ಎಂದು ಆಗ್ರಹಿಸಿ ರೈತ- ಕೃಷಿಕಾರ್ಮಿಕರ ಸಂಘಟನೆ ಆರ್ ಕೆ ಎಸ್ ವತಿಯಿಂದ ಧಾರವಾಡ ಜಿಲ್ಲಾ ಪಂಚಾಯಿತಿಗೆ ಬೀಗ ಹಾಕಿ ಪ್ರತಿಭಟನೆ ನೆಡೆಸಲಾಯಿತು.
ಇಲ್ಲಿಯವರೆಗೆ ಮಾಡಿದ ೨೬ ದಿನಗಳ ಕೂಲಿಯನ್ನು ಬಿಡುಗಡೆ ಈ ಕೂಡಲೇ ಮಾಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಜಿಲ್ಲಾ ಅಧ್ಯಕ್ಷರಾದ ಲಕ್ಷ್ಮಣ ಜಡಗನ್ನವರ ಮಾತನಾಡಿ, ಗ್ರಾಮೀಣ ಭಾಗದ ಜನರಿಗೆ ಅನೂಕೂಲವಾಗಲಿ ಎಂದು ಸರಕಾರವು ತಂದಿರುವ ನರೇಗಾ ಯೋಜನೆಯಲ್ಲಿ ಕೆಲಸ ಪಡೆಯಲು ಹರಸಾಹಸ ಪಡುತ್ತಿದ್ದಾರೆ.
ತೇಗೂರು ಗ್ರಾಮ ಪಂಚಾಯತಿಯಲ್ಲಿ ಬರುವ ಹಳೇ ತೇಗೂರ ಗ್ರಾಮದಲ್ಲಿ ನರೇಗಾ ಯೋಜನೆ ಅಡಿಯಲ್ಲಿ ಕೆಲಸ ಆರಂಭಿಸಿ ೨೬ ದಿನಗಳು ಮುಗಿದಿವೆ.
ಅಷ್ಟೆ ಈಗ ಪಂಚಾಯತಿಯವರು ನಿಮಗೆ ಈಗ ಕೆಲಸ ಇಲ್ಲ. ನೀವು ಈಗ ಮಾಡಿರುವ ಕೆಲಸ ಜಾಸ್ತಿಯಾಗಿದೆ, ನಿಮಗೆ ಕೆಲಸ ನೀಡಲು ಸಾಧ್ಯವಿಲ್ಲ ಎಂದು ಹೇಳುತ್ತಿರುವದು ಅತ್ಯಂತ ಖಂಡನೀಯ. ಈ ಕೂಡಲೇ ಕೆಲಸ ಪ್ರಾರಂಭಿಸಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಪಂಚಾಯಿತಿ ಎದುರೆಗೆ ಪ್ರತಿಭಟನೆ ಆರಂಭವಾಗಿ ಒಂದು ತಾಸು ಕಳೆದರೂ ಯಾವ ಅಧಿಕಾರಿಯೂ ಪ್ರತಿಭಟನೆ ಸ್ಥಳಕ್ಕೆ ಬರುವ ಮಾತಿರಲ್ಲಿ ಯಾರು ಕೂಡ ಬಂದು ಮಾತನಾಡಿಸುವ ಸೌಜನ್ಯಕೂಡ ತೋರಲಿಲ್ಲ.
ಇದರಿಂದ ರೋಚ್ಚಿಗೆದ್ದ ಪ್ರತಿಭಟನಾಕರರು ಜಿಲ್ಲಾ ಪಂಚಾಯಿತಿಗೆ ಬೀಗ ಹಾಕಿ ಪ್ರತಿಭಟನೆ ಮುಂದುವರಿಸಿದಾಗ,ಅನಿವಾರ್ಯವಾಗಿ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿಗಳು ಪ್ರತಿಭಟನೆ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿದರು.
ಬಳಿಕ ಮಾತನಾಡಿದ ಅವರು, ನೀವು ಕೇಳುತ್ತಿರುವ ಸಮಸ್ಯೆಗಳು ಸರಿಯಾಗಿವೆ. ಗ್ರಾಮ ಪಂಚಾಯಿತಿ ವತಿಯಿಂದ ಕೆಲವು ತಪ್ಪುಗಳು ಆಗಿವೆ.
ಆದ್ದರಿಂದ ತಾವು ಸಹಕರಿಸಬೇಕು. ತಮ್ಮ ಬೇಡಿಕೆ ಈಡೇರಿಸುತ್ತವೆ. ನಾಳೆಯಿಂದ ನಿಮಗೆ ಕೆಲಸವನ್ನು ನೀಡುತ್ತಿವೆ ಮತ್ತು ಬಾಕಿಯಿರುವ ವೇತನ ಬಿಡುಗಡೆ ಮಾಡುತ್ತೇವೆ. ಎಂದು ಭರವಸೆ ನೀಡಿದ ಮೇಲೆ ಪ್ರತಿಭಟನೆ ವಾಪಸಪಡೆಯಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾಕಾರ್ಯದರ್ಶಿ ಶರಣು ಗೋನವಾರ, ಸಂಘಟಾನಾಕಾರರಾದ ರಾಮಣ್ಣ ಕಮ್ಮಾರ, ಮಾರುತಿ ಪೂಜಾರ,ಜಗದೀಶ ಪೂಜಾರ,ಬಸಪ್ಪ ಜೋಗಿನ ,ಗೋವಿಂದ ಕೃಷ್ಣಪ್ಪನವರ, ಗೀರೀಶ ಪೂಜಾರ, ಮುಂತಾದವರಿದ್ದರು.