ಧಾರವಾಡ ಎಸ್ಪಿ ಕಚೇರಿ ಇಬ್ಬರು ಸಿಬ್ಬಂದಿಗೆ ಕರೋನಾ
ಧಾರವಾಡ : ಧಾರವಾಡ ಜಿಲ್ಲೆಯಾದ್ಯಂತ ಕಳೆದ ಹದಿನೈದು ಇಪ್ಪತ್ತು ದಿನಗಳಿಂದ ಜಿಲ್ಲೆಯ ಜನರ ನೆಮ್ಮದಿ ಹಾಳು ಮಾಡಿರುವ ಕರೋನಾ ಅಟ್ಟಹಾಸ ಇದೀಗ ಮತ್ತೇ ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕಚೇರಿಗೆ ಕಾಲಿಟ್ಟಿದೆ.
ಈ ಹಿಂದೆ ಕಚೇರಿಯ ಪಾಸ್ ಪೋರ್ಟ್ ವಿಭಾಗದ ಎ ಎಸ್ ಐ ವಿನಾಯಕ ಇಟಗಿ ಅವರನ್ನು ಬಲಿ ಪಡೆದಿರುವ ಕರೋನಾ ಜಿಲ್ಲೆಯಾದ್ಯಂತ ಪಿಎಸ್ ಐ ಸೇರಿದಂತೆ ಹಲವು ಪೊಲೀಸರಿಗೂ ವಕ್ಕರಿಸಿತ್ತು.
ಇದೀಗ ಮತ್ತೇ ಕಚೇರಿಯ ಇಬ್ಬರು ಸಿಬ್ಬಂದಿಗೆ ಕರೋನಾ ಬಂದಿರುವ ಹಿನ್ನಲೆಯಲ್ಲಿ ಧಾರವಾಡ ಎಸ್ಪಿ ಕಚೇರಿಯನ್ನು ಎರಡು ದಿನಗಳ ಕಾಲ ಸೀಲ್ ಡೌನ್ ಮಾಡಲಾಗಿದೆ ಎಂದು ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ್ ಅವರು ಪ್ರಜಾಕಿರಣ.ಕಾಮ್ ಗೆ ತಿಳಿಸಿದ್ದಾರೆ.
ಇಬ್ಬರು ಸೋಂಕಿತರ ಸಂಪರ್ಕದಲ್ಲಿರುವ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರನ್ನು ಗಂಟಲು ತಪಾಸಣೆ ಹಾಗೂ ಹೋಂ ಕ್ವಾರಂಟಿನ್ ಗೆ ಒಳಪಡಿಸಲಾಗುತ್ತಿದ್ದು. ಅವರ ಸಂಪರ್ಕದಲ್ಲಿದ್ದ ಹಲವು ಪೊಲೀಸ್ ಸಿಬ್ಭಂದಿ ಆತಂಕಗೊಂಡಿದ್ದಾರೆ ಎಂದು ತಿಳಿದುಬಂದಿದೆ.