ಧಾರವಾಡ prajakiran.com : ಬೆಣ್ಣಿಹಳ್ಳದ ಪ್ರವಾಹಕ್ಕೆ ಐವರು ಸಿಲುಕಿದ ಘಟನೆ ಧಾರವಾಡ ಜಿಲ್ಲೆಯಲ್ಲಿ ಸೋಮವಾರ ರಾತ್ರಿ ನಡೆದಿದೆ.
ನವಲಗುಂದ ತಾಲೂಕಿನ ಸೊಟಕನಾಳ ಬಳಿ ಪ್ರವಾಹ ಸಂಭವಿಸಿದ್ದರಿಂದ ಈ ಅನಾಹುತ ನಡೆದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಸೊಟಕನಾಳ ಗ್ರಾಮದ ಬಳಿಯಿರುವ ಬೆಣ್ಣೆಹಳ್ಳದಲ್ಲಿ ಐವರು ಸಿಲುಕಿಕೊಂಡಿದ್ದಾರೆ.
ರಾತ್ರಿಯಿಡಿ ನೀರಿನ ಮಧ್ಯೆಯೇ ಕಳೆದಿರುವ ಐವರು, ನಿನ್ನೆ ಜಮೀನಿಗೆ ಹೋದಾಗ ಸುತ್ತುವರೆದಿರುವ ಬೆಣ್ಣಿಹಳ್ಳದ ನೀರಿನಿಂದ ಕಂಗಲಾಗಿದ್ದಾರೆ.
ಕಲ್ಲಪ್ಪ ಹಡಪದ, ನವೀನ ಹಡಪದ, ರವಿ, ಚನ್ನವ್ವ ಮತ್ತು ಶೇಖವ್ವ ಪ್ರವಾಹಕ್ಕೆ ಸಿಲುಕಿದವರು ಎಂದು ಗುರುತಿಸಲಾಗಿದೆ.
ನಿನ್ನೆಯಿಂದ ನೀರಿನ ಮಧ್ಯೆಯೇ ಲಾಕ್ ಆಗಿರುವ ಐವರು ರಾತ್ರಿಯಿಡಿ ಕೂಗಿ ಕೂಗಿ ಜನರನ್ನು ಕರೆದಿದ್ದಾರೆ.
ಐವರ ಧ್ವನಿ ಕೇಳಿ ಜಮೀನಿನತ್ತ ಧಾವಿಸಿದ ಜನತೆ ಬೆಳಗ್ಗೆ ಧ್ವನಿ ಕೇಳಿ ವಿಷಯ ತಿಳಿದ ಸ್ಥಳೀಯರು ಪೊಲೀಸರಿಗೆ ಹಾಗೂ ಜಿಲ್ಲಾಡಳಿತಕ್ಕೆ ಮಾಹಿತಿ ರವಾನಿಸಿದ್ದಾರೆ
ಘಟನಾ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ, ಪೊಲೀಸರು ಹಾಗೂ ನವಲಗುಂದ ತಾಲೂಕು ಆಡಳಿತ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ.