ಧಾರವಾಡ prajakiran.com : ಧಾರವಾಡ ಜಿಲ್ಲೆಯ ನವಲಗುಂದ ಪಿಎಲ್ ಡಿ (PLD) ಬ್ಯಾಂಕಿನ ಅಧ್ಯಕ್ಷರು, ಸಹಕಾರಿ ಧುರೀಣರಾಗಿದ್ದ ದೇಸಾಯಿಗೌಡ್ರು ಶಂಕರಗೌಡ ಪಾಟೀಲ್ ಇವರು ಮೇ 4 ರಂದು ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ದೇಸಾಯಿ ಗೌಡ್ರು ನವಲಗುಂದ ತಾಲೂಕಿನ ಮಾಜಿ ಶಾಸಕರಾದ ದಿ. ಶಂಕರಗೌಡ್ರ.ವಿ.ಪಾಟೀಲ.(ಶಲವಡಿ) ಅವರ ಪುತ್ರರಾಗಿದ್ದರು.
ಪ್ರಸ್ತುತ ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದ ಅವರು, ಈ ಹಿಂದೆ ಧಾರವಾಡ ಜಿಲ್ಲಾ ಪಂಚಾಯತ ಸದಸ್ಯ , ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು.
ಅವರು ಪತ್ನಿ, ಪುತ್ರ, ಪುತ್ರಿ ಹಾಗೂ ಸಹೋದರರಾಗಿರುವ ಕೆಸಿಸಿ ಬ್ಯಾಂಕ್ ಅಧ್ಯಕ್ಷ ಬಾಪುಗೌಡ ಪಾಟೀಲ ಸೇರಿದಂತೆ ಅಪಾರ ಬಂಧುಗಳನ್ನು ಅಗಲಿದ್ದಾರೆ.
ದೇಸಾಯಿಗೌಡ್ರು ನಿಧನನಿಂದ ಸಹಕಾರ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಕುಟುಂಬಕ್ಕೆ ದು:ಖ ತಡೆಯುವ ಶಕ್ತಿ ನೀಡಲೆಂದು ಅನೇಕರು ಪ್ರಾರ್ಥಿಸಿದ್ದಾರೆ.