ನವದೆಹಲಿ prajakiran.com : ಕೇಂದ್ರ ಸರಕಾರದ ವಿರುದ್ದ ರೊಚ್ಚಿಗೆದ್ದ ಅನ್ನದಾತರು ಇತಿಹಾಸದಲ್ಲಿಯೇ ಮೊದಲ ಬಾರಿಗೆ ಕೆಂಪುಕೋಟೆಗೆ ಲಗ್ಗೆ ಹಾಕಿದ ಅನ್ನದಾತರು ರಾಷ್ಟ್ರಧ್ವಜ ಹಾರಿಸುವ ಸ್ಥಳದಲ್ಲಿ ರೈತರು ಧ್ವಜ ಹಾರಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಪೊಲೀಸರ ಲಾಠಿ ಚಾರ್ಜ್, ಅಶ್ರುವಾಯುಗೆ ಬಗ್ಗದ ಅನ್ನದಾತ, ಸ್ಥಳದಲ್ಲಿಯೇ ಠಿಕಾಣಿ ಹೂಡಿದ್ದು, ರಾಷ್ಟ್ರರಾಜಧಾನಿ ನವದೆಹಲಿ ಹೈಡ್ರಾಮಾಕ್ಕೆ ಸಾಕ್ಷಿಯಾಯಿತು.
ಕೆಂಪುಕೋಟೆಯ ಮೂರು ಕಡೆ ಸಿಖ್ ಧ್ವಜವನ್ನು ಹಾರಿಸಿದ್ದಾರೆ. ನೇರಾ ನೇರ ಕೆಂಪುಕೋಟೆಗೆ ಲಗ್ಗೆ ಹಾಕಿ ಧ್ವಜ ಹಾರಿಸಿದರು.
ರೊಚ್ಚಿಗೆದ್ದ ರೈತರಿಂದ ಹಿಂಸಾಚಾರಕ್ಕೆ ತಿರುಗಿದ ಶಾಂತಿಯುತ ಹೋರಾಟ ಅನ್ನದಾತರ ಆಕ್ರೋಶಕ್ಕೆ ಬೆಚ್ಚಿ ಬಿದ್ದಿದೆ.
ದೆಹಲಿಯೊಳಗೆ ನುಗ್ಗಿದ ರೈತರು ಮೂರು ರಸ್ತೆಗಳನ್ನು ಹೊರತು ಪಡಿಸಿ ನೂರಾರು ರಸ್ತೆಗಳ ಸಂಚಾರ ಬಂದ್ ಆಗಿದೆ. ಟ್ರ್ಯಾಕ್ಟರ್ ನಲ್ಲಿ ಬಂದ ಅನ್ನದಾತರು ಬ್ಯಾರಿಕೇಡ್ ಧ್ವಂಸಗೊಳಿಸಿದರು.
ಕೆಲವಡೆ ಟ್ರಕ್, ಬಸ್ ಗಳ ಗಾಜುಗಳು ಪುಡಿ ಪುಡಿಯಾಗಿವೆ. ರೈತರ ರೋಷಾಗ್ನಿ ಎಲ್ಲಡೆ ಹರಡಿದೆ. ಕೆಂಪುಕೋಟೆಯಿಂದ ಹೊರ ಹೋಗಲು ನಿರಾಕರಿಸಿದ ರೈತರು ಪಟ್ಟು ಹಿಡಿದಿದ್ದಾರೆ.
ಈ ಹಿನ್ನಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ತುರ್ತು ಸಭೆ ನಡೆಸಿ ಪರಿಸ್ಥಿತಿಯ ಅವಲೋಕನ ನಡೆಸುತ್ತಿದ್ದಾರೆ.