ಧಾರವಾಡ prajakiran.com : ಧಾರವಾಡ ಜಿಲ್ಲೆಯ ಜಿಲ್ಲಾಧಿಕಾರಿ ಕಚೇರಿ ಎದುರೇ ಯುವಕರ ರೌಡಿಸಂ ನಡೆದಿದೆ.
ಪೊಲೀಸರ ಎದುರೇ ನಡೆದ ಹಲ್ಲೆ ಇದಾಗಿದ್ದು, ಯುವಕನ ಮೇಲೆ ಹಲ್ಲೆ ಮಾಡಲಾಗಿದೆ.
ಹಣದ ವಿಚಾರವಾಗಿ ಎರಡು ಗುಂಪುಗಳ ನಡುವೆ ಜಗಳ ನಡೆದಿದೆ.
ಯುವಕನ ಅಂಗಿ ಹರಿದು, ಹಲ್ಲೆ ಮಾಡಿದ ಯುವಕರ ತಂಡ
ಬೆಲ್ಟ್ ನಿಂದ ಮನಬಂದಂತೆ ಥಳಿಸಿದ್ದಾರೆ.
ಹಾಡಹಗಲೇ ಡಿಸಿ ಕಚೇರಿ ಎದುರು ಗಲಾಟೆ ನಡೆದಿರುವುದು ಸಾರ್ವಜನಿಕರನ್ನು ಬೆಚ್ಚಿಬೀಳಿಸಿದೆ.
ಎಲ್ಲಾ ಘಟನೆ ನೋಡುತ್ತಾ ನಿಂತುಕೊಂಡ ಪೊಲೀಸರ ನಡೆಗೆ ಅಸಮಾಧಾನ ವ್ಯಕ್ತವಾಗಿದೆ.
ಧಾರವಾಡ ಜಿಲ್ಲೆಯ ಜಿಲ್ಲಾಧಿಕಾರಿ ಕಚೇರಿ ಭದ್ರತೆಗೆ ಪೊಲೀಸರು ಸದಾಕಾಲವೂ ನಿಯೋಜನೆಗೊಂಡಿರುತ್ತಾರೆ.
ಧಾರವಾಡದ ಉಪನಗರ ಠಾಣೆ ಪೊಲೀಸರ ನಡೆ ಜಿಲ್ಲಾಡಳಿತಕ್ಕೆ ತಲೆ ಬಿಸಿಯಾಗಿದೆ.