ಧಾರವಾಡ prajakiran.com : ವಿದ್ಯಾನಗರಿ ಧಾರವಾಡ ಜಿಲ್ಲೆಯಲ್ಲಿ ಕಳೆದ ಹದಿನೈದು ದಿನಗಳಿಂದ ಕರೋನಾ ಸೋಂಕಿತರ ಸಂಖ್ಯೆ ಎರುತ್ತಲೇ ಇದ್ದು, ನಿಯಂತ್ರಣಕ್ಕೆ ಬರುವ ಯಾವ ಸಾಧ್ಯತೆಗಳು ಕಾಣುತ್ತಿಲ್ಲ.
ಕಳೆದ ಒಂದು ವಾರದಲ್ಲಿಯೇ ಅತಿಹೆಚ್ಚು ಪ್ರಕರಣಗಳು ಬೆಳಕಿಗೆ ಬರುವ ಬರುವ ಜಿಲ್ಲೆಯ ಒಟ್ಟು ಪ್ರಕರಣಗಳ ಸಂಖ್ಯೆ 1159 ಕ್ಕೆ ಏರಿದೆ.ಆ ಮೂಲಕ ಸಾವಿರದ ಗಡಿ ದಾಟಿರುವುದು ಜನತೆಯನ್ನು ಆತಂಕಕಕ್ಕೆ ಸಿಲುಕಿಸಿದೆ.
ಸ್ವಲ್ಪ ಸಮಾಧಾನದ ಸಂಗತಿಯೆಂದರೆ ಇದುವರೆಗೆ 434 ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಆ ಮೂಲಕ ಒಟ್ಟು 687 ಪ್ರಕರಣಗಳು ಸಕ್ರಿಯವಾಗಿದ್ದರೆ, ಇನ್ನೂ 25 ಜನ ಸೋಂಕಿತರು ಕೋವಿಡ್ ನಿಯೋಜಿತ ಆಸ್ಪತ್ರೆಗಳ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಜು 13ರಂದು ಸೋಮವಾರ ಜಿಲ್ಲೆಯಲ್ಲಿ ಐದು ಜನ ಸಾವನ್ನಪ್ಪಿದ್ದು ಆಮೂಲಕ ಧಾರವಾಡ ಜಿಲ್ಲೆಯಲ್ಲಿ ಈವರೆಗೆ ಒಟ್ಟು 38 ಜನ ಕರೋನಾ ಸೋಂಕಿತರು ಚಿಕಿತ್ಸೆ ಫಲಿಸದೆ ಮೃತಪಟ್ಟಂತಾಗಿದೆ ಎಂದು ಜಿಲ್ಲಾಧಿಕಾರಿಗಳಾದ ನಿತೇಶ್ ಪಾಟೀಲ್ ತಿಳಿಸಿದ್ದಾರೆ.
ಜು 13ರಂದು ಸೋಮವಾರ ಜಿಲ್ಲೆಯಲ್ಲಿ ಐದು ಜನ ಸಾವನ್ನಪ್ಪಿದ್ದವರ ವಿವರ
ಪಿ 35231 ( 85, ಮಹಿಳೆ) ಹುಬ್ಬಳ್ಳಿ ಕೌಲಪೇಟ
ಪಿ- 38792 ( 74 ,ಮಹಿಳೆ) ಕುಂದಗೋಳ ತಾಲೂಕಿನ ಯಲಿವಾಳದವರು.
ಪಿ- 38818 (70 ,ಪುರುಷ) ನವಲಗುಂದ ತಾಲೂಕು ಜಾವೂರ ಗ್ರಾಮದವರು.
ಪಿ-40107 ( 63, ಪುರುಷ) ಹುಬ್ಬಳ್ಳಿ ನೇಕಾರ ನಗರ
ಪಿ- 40136 (38 ಪುರುಷ) ಹಳೆಹುಬ್ಬಳ್ಳಿ ಆನಂದನಗರ ಬ್ಯಾಹಟ್ಟಿ ಪ್ಲಾಟ್ ನಿವಾಸಿ