ರಾಜ್ಯ

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮಾಜಿ ಸದಸ್ಯರಾದ ಗಣೇಶ ಟಗರಗುಂಟಿ, ಮಂಜುನಾಥ ಕದಂ, ಪ್ರಕಾಶ ಘಾಟಗೆ, ಯಾಸೀನ ಹಾವೇರಿಪೇಟ ಪತ್ನಿ ಸೇರಿ ಹಲವರ ಉಚ್ಛಾಟನೆ ಪತ್ರ ಬರೆದ ಕಾಂಗ್ರೆಸ್

ಹುಬ್ಬಳ್ಳಿ-ಧಾರವಾಡ prajakiran. com : ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್
ಪಕ್ಷದ ಟಿಕೆಟ್ ಆಕಾಂಕ್ಷಿಗಳಾಗಿದ್ದ ಅನೇಕರು ಪಕ್ಷದ ವಿರುದ್ಧ ಬಂಡಾಯ ವೆದ್ದಿದ್ದು, ಹಲವರು ಪಕ್ಷೇತರ ಅಭ್ಯರ್ಥಿಗಳಾಗಿ ಅಖಾಡಕ್ಕೆ ಇಳಿದಿರುವುದು ಅಭ್ಯರ್ಥಿಗಳಿಗೆ ತಲೆ ನೋವಾಗಿದೆ.

ಹೀಗಾಗಿ ಈಗ ಕಣದಲ್ಲಿರುವ 34 ಪ್ರಮುಖರನ್ನ ಪಕ್ಷದಿಂದ 6 ವರ್ಷ ಅಮಾನತ್ತು ಮಾಡಲು, ಮಹಾನಗರ ಜಿಲ್ಲಾಧ್ಯಕ್ಷ ಕೆಪಿಸಿಸಿಗೆ ಪತ್ರವನ್ನ ಬರೆದಿದ್ದಾರೆ.

ಅದರಲ್ಲಿ ಪ್ರಮುಖವಾಗಿ ಪಾಲಿಕೆಯ ಮಾಜಿ ಸದಸ್ಯರಾಗಿದ್ದ ಗಣೇಶ ಟಗರಗುಂಟಿಯವರಿಗೆ ಟಿಕೆಟ್ ಕೊಡದೇ, ಮಹಾನಗರ ಜಿಲ್ಲಾಧ್ಯಕ್ಷ ಅಲ್ತಾಪ ಹಳ್ಳೂರ, ತಮ್ಮ ಮಗನಿಗೆ ಟಿಕೆಟ್ ಪಡೆದುಕೊಂಡಿದ್ದರು.

ಹೀಗಾಗಿ, ಅದೇ ವಾರ್ಡಿನಲ್ಲಿ ಗಣೇಶ ಟಗರಗುಂಟಿ ಹಲವು ಮುಸ್ಲಿಂ ನಾಯಕರ ಬೆಂಬದೊಂದಿಗೆ ಚುನಾವಣೆಗೆ ನಿಂತಿದ್ದಾರೆ.

ಹುಬ್ಬಳ್ಳಿಯಲ್ಲಿ ಸುಧಾ ಮಣ್ಣೆಕುಂಟ್ಲಾ ಇನ್ನುಳಿದಂತೆ ಧಾರವಾಡದ ವಾರ್ಡ್ ನಂಬರ 8 ರಲ್ಲಿ ಮಾಜು ಸದಸ್ಯರಾದ ಮಂಜುನಾಥ ಕದಂ, ಪ್ರಕಾಶ ಘಾಟಗೆ, 6 ರಲ್ಲಿ
ಯಾಸೀನ ಹಾವೇರಿಪೇಟೆಯವರ ಪತ್ನಿ, ಸೇರಿ ಒಟ್ಟು 34 ಬಂಡುಕೋರ ಅಭ್ಯರ್ಥಿಗಳನ್ನ ಅಮಾನತ್ತು ಮಾಡುವಂತೆ ಪತ್ರ ಬರೆದಿದ್ದಾರೆ. 

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರಿಗೆ ಪ್ರತಿ ವಾರ್ಡಿನ ವಿವರವನ್ನ ಸಲ್ಲಿಸಿದ್ದು, ಇಂದು ಸಂಜೆಯವರೆಗೆ ಕಣದಿಂದ ಹಿಂದಕ್ಕೆ ಸರಿದು ಅಭ್ಯರ್ಥಿಗೆ ಬೆಂಬಲ‌ ನೀಡದಿದ್ದರೆ ಉಚ್ಚಾಟನೆ ಯಂತಹ ಅಂತಿಮ ತೀರ್ಮಾನ ಹೊರಗೆ ಬರಲಿದೆ ಎಂದು ಮುಖಂಡರು ಹೇಳಿದ್ದಾರೆ‌.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *