ರಾಜ್ಯ

ಭಾನುವಾರ ಬೆಳಗ್ಗೆ 97, ಸಂಜೆ ಮತ್ತೇ 33 ಪ್ರಕರಣ ಪತ್ತೆ : ಎರಡು ಸಾವಿರ ದಾಟಿದ ರಾಜ್ಯದ  ಸೋಂಕಿತರ ಸಂಖ್ಯೆ

ಬೆಂಗಳೂರು prajakiran.com : ಮಹಾಮಾರಿ ಕರೋನಾಅಟ್ಟ ಹಾಸ ಭಾನುವಾರವೂ ಮುಂದುವರೆದಿದ್ದು, ಬರೋಬ್ಬರಿ 130 ಜನರಿಗೆ ಒಂದೇ ದಿನ ವಕ್ಕರಿಸಿಕೊಂಡಿದೆ. ಆ ಮೂಲಕ ರಾಜ್ಯದ ಸೋಂಕಿತರ ಸಂಖ್ಯೆ ಎರಡು ಸಾವಿರ ಗಡಿ ದಾಟಿದೆ. ಇದು ರಾಜ್ಯದ ಸೋಂಕಿತರನ್ನಷ್ಟೇ ಅಲ್ಲದೆ, ಅವರು ಕುಟುಂಬಸ್ಥರನ್ನು ಕೂಡ ಬೆಚ್ಚಿಬೀಳಿಸಿದೆ. ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಸಾಗಿದ್ದು, ಕಡಿಮೆಯಾಗುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ ಎಂದರೆ ತಪ್ಪಾಗಲಾರದು. ಭಾನುವಾರ ರಾಜ್ಯದ ಸೋಂಕಿತರ ಸಂಖ್ಯೆ2089ಕ್ಕೆ ಏರಿದೆ. ಈವರೆಗೆ ಒಟ್ಟು 654 ಸೋಂಕಿತರು ಗುಣಮುಖ ರಾಗಿದ್ದು, ಸಮಾಧಾನದ ಸಂಗತಿಯೆಂದರೆ ಇಂದು […]

ರಾಜ್ಯ

ಹಾಸನದಲ್ಲಿ ಭಾನುವಾರ 14 ಪ್ರಕರಣ : ನೂರಕ್ಕೂ ಅಧಿಕ ಪೊಲೀಸರಿಗೆ ಕ್ವಾರಂಟೆನ್

ಹಾಸನ prajakiran.com : ಹಾಸನದಲ್ಲಿ ಭಾನುವಾರ ಮತ್ತೆ 14 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಅದರಲ್ಲಿ ಒಬ್ಬ ಕಾನಸ್ಟೇಬಲ್ ಇದ್ದಾರೆ. ಹೀಗಾಗಿ ಅವರೊಂದಿಗೆ ಸಂಪರ್ಕ ಹೊಂದಿದ್ದ ನೂರಕ್ಕೂ ಅಧಿಕ ಪೊಲೀಸರಿಗೆ ಕ್ವಾರಂಟೆನ್ ಮಾಡಲಾಗಿದೆ. ಇವರು ಬೆಂಗಳೂರಿನಲ್ಲಿ ಡ್ಯೂಟಿ ಮುಗಿಸಿ ಹಾಸನಕ್ಕೆ ಬಂದಿದ್ದರು. ಹಾಸನಕ್ಕೆ ಹೋಗುವ ಮುಂಚೆ 60ಕ್ಕೂ ಹೆಚ್ಚು ಜನರಿಗೆ ಭೇಟಿಯಾಗಿದ್ದರು. ಇದು ಪೊಲೀಸರಿಗೆ ತೀವ್ರ ಆತಂಕ ಸೃಷ್ಟಿಸಿತ್ತು. ಅವರ ಟ್ರಾವೆಲ್ ಹಿಸ್ಟರಿ ಆರೋಗ್ಯ ಇಲಾಖೆಯನ್ನ ಬೆಚ್ಚಿಬೀಳಿಸಿದೆ. ಸೋಂಕಿತ ಕಾನಸ್ಟೇಬಲ್ ಸಂಪರ್ಕದಲ್ಲಿದ್ದ ಸಿವಿಲ್ ಹಾಗೂ ಕೆಎಸ್ ಆರ್ ಪಿ […]

ರಾಜ್ಯ

ಗೋಕಾಕ್ ಕ್ವಾರಂಟೈನ್‌ ಕೇಂದ್ರದಿಂದ ಪರಾರಿಯಾಗಿದ್ದ ಮಹಿಳೆ ಪತ್ತೆ

ಬೆಳಗಾವಿ prajakiran.com : ಗೋಕಾಕ್ ಕ್ವಾರಂಟೈನ್‌  ಕೇಂದ್ರದಿಂದ ಪರಾರಿಯಾಗಿದ್ದ ಮಹಿಳೆ ಕೊನೆಗೂ ಪತ್ತೆಯಾಗಿದ್ದಾರೆ. ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮದಲ್ಲಿ ಪತ್ತೆಯಾದ ಮಹಿಳೆ ತನ್ನ ಪತಿಯೊಂದಿಗೆ ತೆರಳಿದ್ದರು. ಬೆಳಗಾವಿ ಜಿಲ್ಲೆ ಗೋಕಾಕ್ ಕ್ವಾರಂಟೈನ್ ಕೇಂದ್ರದಿಂದ ನಿನ್ನೆ ಮಧ್ಯಾಹ್ನ 30 ವರ್ಷದ ಮಹಿಳೆ ಕಾಲು ಕಿತ್ತಿದ್ದರು.  ಮಹಿಳೆ ಅಲ್ಲಿಂದ ತೆರಳಿದ್ದರಿಂದ ತೀವ್ರ ಆತಂಕ ಎದುರಾಗಿತ್ತು. ಮಹಿಳೆಗೆ ಕರೋನಾ ದೃಢಪಟ್ಟರೆ ಹೇಗೆ ಎಂಬ ಆತಂಕ ಎದುರಾಗಿತ್ತು. ಮಹಾರಾಷ್ಟ್ರದ ನೂಲ್ ಗ್ರಾಮದಿಂದ‌ ಪಂಜಾನಟ್ಟಿ ಗ್ರಾಮಕ್ಕೆ ಬಂದಿದ್ದ ಮಹಿಳೆ ಇವರಾಗಿದ್ದರು. ಹೀಗಾಗಿ ಇವರನ್ನು […]

ರಾಜ್ಯ

ರಾಜ್ಯದಲ್ಲಿ ಭಾನುವಾರ ಮತ್ತೆ ಹೊಸದಾಗಿ 97 ಕೇಸ್ ಪತ್ತೆ

ಬೆಂಗಳೂರು prajakiran.com :  ರಾಜ್ಯದಲ್ಲಿ ಭಾನುವಾರ ಮತ್ತೆ ಹೊಸದಾಗಿ 97 ಕೇಸ್ ಪತ್ತೆಯಾಗಿದ್ದು, ಕರ್ನಾಟಕದ ಸೋಂಕಿತರ ಸಂಖ್ಯೆ 2056 ಕ್ಕೆ ಏರಿದೆ.  ಆ ಮೂಲಕ ಕರುನಾಡು 2 ಸಾವಿರದ ಗಡಿ ದಾಟಿದೆ. ಚಿಕ್ಕಬಳ್ಳಾಪುರದ ಎಲ್ಲಾ 26 ಜನರು ಮಹಾರಾಷ್ಟ್ರದಿಂದ ಬಂದವರಾಗಿದ್ದಾರೆ. ಅವರಿಗೆ ಕರೋನಾ ಸೋಂಕು ಕಾಣಿಸಿಕೊಂಡಿರುವುದು ಜಿಲ್ಲೆಯ ಜನತೆಯನ್ನು ಬೆಚ್ಚಿಬೀಳಿಸಿದೆ. ಕರಾವಳಿ ಭಾಗಕ್ಕೂ ಕರೋನಾ ಸೋಂಕು ಕಾಡುತ್ತಲೇ ಇದೆ. ಭಾನುವಾರ ಉಡುಪಿ ಜಿಲ್ಲೆಯಲ್ಲಿ 18 ಪ್ರಕರಣ ಬೆಳಕಿಗೆ ಬಂದಿವೆ. ಅದೇ ರೀತಿ ಸಕ್ಕರೆ ನಾಡು ಮಂಡ್ಯದಲ್ಲಿ ಭಾನುವಾರ […]

ರಾಜ್ಯ

ಜೂನ್ 1 ರಿಂದ ಸೀಮಿತ ಕಾರ್ಯನಿರ್ವಹಣೆ ಮಾಡಲಿರುವ ರಾಜ್ಯ ಎಲ್ಲಾ ಜಿಲ್ಲಾ ನ್ಯಾಯಾಲಯಗಳು

ಬೆಂಗಳೂರು prajakiran.com : ಬೆಂಗಳೂರು, ಧಾರವಾಡ ಹಾಗೂ ಕಲಬುರಗಿ ಹೈಕೋರ್ಟ್ ಒಳಗೊಂಡಂತೆ ರಾಜ್ಯಾದ್ಯಂತ ಎಲ್ಲಾ ಜಿಲ್ಲಾ ನ್ಯಾಯಾಲಯಗಳು ಮತ್ತು ವಿಚಾರಣಾ ನ್ಯಾಯಾಲಯಗಳು ಜೂನ್ 1 ರಿಂದ ಸೀಮಿತವಾದ ಕಾರ್ಯನಿರ್ವಹಣೆ ಮಾಡಲಿವೆ ಎಂದು ಕರ್ನಾಟಕ ಹೈಕೋರ್ಟ್ ನಿರ್ಧಾರ ಕೈಗೊಂಡಿದೆ. ಜೂನ್ 1 ರಂದು  ಪುನರಾರಂಭಗೊಳ್ಳುವ ನ್ಯಾಯಾಲಯಗಳ ಕಾರ್ಯನಿರ್ವಹಣಾ ವಿಧಾನಗಳ ಮಾನದಂಡಗಳ (Standard Operating Procedure) ಕುರಿತು ವಿಸ್ತೃತ ಮಾಹಿತಿಯನ್ನು ಕರ್ನಾಟಕ ಹೈಕೋರ್ಟಿನ ಅಧಿಕೃತ ವೆಬ್ ಸೈಟ್ ನಲ್ಲಿ ಹಾಗೂ ರಾಜ್ಯಾದ್ಯಂತ ಇರುವ ಸಂಬಂಧಪಟ್ಟ ಎಲ್ಲಾ ಜಿಲ್ಲಾ ನ್ಯಾಯಾಲಯಗಳ ಅಧಿಕೃತ ವೆಬ್ […]

ರಾಜ್ಯ

ಬಾದಾಮಿಯ ಢಾಣಕಶಿರೂರು ಗ್ರಾಮದ 23 ವರ್ಷದ ಯುವತಿ ಹುಬ್ಬಳ್ಳಿಯ ಕಿಮ್ಸ್ ನಿಂದ ಗುಣಮುಖರಾಗಿ ಬಿಡುಗಡೆ

ಹುಬ್ಬಳ್ಳಿ prajakiran.com : ತೀವ್ರ ಉಸಿರಾಟದ ತೊಂದರೆಯ ( SARI) ಲಕ್ಷಣದಿಂದ ಕಳೆದ ಮೇ 3 ರಂದು ಕೋವಿಡ್ ದೃಢಪಟ್ಟಿದ್ದ, ಬಾಗಲಕೋಟ ಜಿಲ್ಲೆಯ ಬಾದಾಮಿ ತಾಲ್ಲೂಕಿನ ಢಾಣಕ ಶಿರೂರಿನ ಮಹಿಳೆ ಸಂಪೂರ್ಣ ಗುಣಮುಖರಾಗಿದ್ದಾರೆ. ಅವರನ್ನು ನಿನ್ನೆ ಮೇ 23 ರ ಶನಿವಾರ ಸಂಜೆ ಹುಬ್ಬಳ್ಳಿಯ ಕಿಮ್ಸ್ ನಿಂದ ಬಿಡುಗಡೆಗೊಳಿಸಲಾಯಿತು. ಗುಣಮುಖರಾದ ಮಹಿಳೆಯನ್ನು ಚಪ್ಪಾಳೆ ತಟ್ಟಿ, ಶುಭ ಹಾರೈಸಿ ಬೀಳ್ಕೊಟ್ಟರು. ಕಳೆದ 20 ದಿನಗಳ ಅವಧಿಯಲ್ಲಿ ತಮಗೆ ಚಿಕಿತ್ಸೆ ನೀಡಿ, ದೈಹಿಕ ಮತ್ತು ಮಾನಸಿಕ ಆರೋಗ್ಯ ರಕ್ಷಿಸಿದ ಕಿಮ್ಸ್  ಆಸ್ಪತ್ರೆಯ […]

ರಾಜ್ಯ

ಧಾರವಾಡದ ಐವರು ಕೋವಿಡ್ ಸೋಂಕಿತರ ಪ್ರಯಾಣ ವಿವರ

ಧಾರವಾಡ prajakiran.com : ಧಾರವಾಡ ಜಿಲ್ಲೆಯಲ್ಲಿ ಶನಿವಾರ ಮೇ 23ರಂದು ದೃಢಪಟ್ಟಿರುವ ಕೋವಿಡ್ ಸೋಂಕಿತರಾದ ಪಿ- 1913 ,ಪಿ- 1942 , ಪಿ-1943 , ಪಿ-1944 ಹಾಗೂ ಪಿ- 1945  ಇವರ ಪ್ರಯಾಣದ ವಿವರಗಳನ್ನು ಸಾರ್ವಜನಿಕ ಮಾಹಿತಿಗಾಗಿ ಜಿಲ್ಲಾಧಿಕಾರಿ ದೀಪಾ ಚೋಳನ್ ಪ್ರಕಟಿಸಿದ್ದಾರೆ.  ಪಿ- 1913 ಪ್ರಯಾಣ ವಿವರ :  ಇವರು ಧಾರವಾಡ ನಗರದ ನಿವಾಸಿಗಳಾಗಿರುತ್ತಾರೆ .  ಮಾ. 10 ರಂದು ಇವರು ಮುಂಬೈಗೆ ಹೋಗಿರುತ್ತಾರೆ. ಮೇ 9  ರಂದು ಬಾಡಿಗೆ ಕಾರ್ ನಂ : ಎಂ […]

ರಾಜ್ಯ

ವಿದ್ಯಾನಗರಿ ಧಾರವಾಡದಲ್ಲಿ ಒಂದೇ ದಿನ ಐದು ಪ್ರಕರಣ ಪತ್ತೇ

ಧಾರವಾಡ prajakiran.com : ವಿದ್ಯಾನಗರಿ ಧಾರವಾಡದ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಸಾಗಿದೆ. ಶನಿವಾರ ಬೆಳಗ್ಗೆಯಷ್ಟೇ ಒಂದು ಕರೋನಾ ಪ್ರಕರಣ ದೃಢಪಟ್ಟಿತ್ತು. ಸಂಜೆ ವೇಳೆಗೆ ಮತ್ತೇ ನಾಲ್ಕು ಕೋವಿಡ್ ಪಾಸಿಟಿವ್ ಪ್ರಕರಣಗಳು  ಪತ್ತೆಯಾಗಿವೆ  ಎಂದು ಜಿಲ್ಲಾಧಿಕಾರಿಗಳಾದ ದೀಪಾ ಚೋಳನ್ ತಿಳಿಸಿದ್ದಾರೆ. ಶನಿವಾರ ಬೆಳಗ್ಗೆ ಪಿ-1913 ನೇ ಸೋಂಕಿತ 51 ವರ್ಷದ ಪುರುಷ ಮಹಾರಾಷ್ಟ್ರ ರಾಜ್ಯದಿಂದ ಧಾರವಾಡಕ್ಕೆ ಹಿಂದಿರುಗಿರುವ  ಪ್ರಯಾಣ ಹಿನ್ನೆಲೆ ಹೊಂದಿದ್ದರು. ಅದೇ ರೀತಿ ಸಂಜೆಯ ವೇಳೆಗೆ ಬಂದ ಸೋಂಕಿತರನ್ನು ಪಿ-1942 (29 ವರ್ಷ ದ ಮಹಿಳೆ), […]

ರಾಜ್ಯ

ರಾಜ್ಯದಲ್ಲಿ ಬೆಳಗ್ಗೆ196, ಸಂಜೆ 20 ಪಾಸಿಟಿವ್ ಕೇಸ್ ಪತ್ತೆ : 1959ಕ್ಕೆ ಏರಿಕೆಯಾದ ಸೋಂಕಿತರ ಸಂಖ್ಯೆ

ಬೆಂಗಳೂರು prajakiran.com : ರಾಜ್ಯದಲ್ಲಿ ಶನಿವಾರ ಒಂದೇ ದಿನ 216 ಪಾಸಿಟಿವ್ ಕೇಸ್ ಪತ್ತೆಯಾಗುವ ಮೂಲಕ ರಾಜ್ಯದ ಜನತೆಯನ್ನು ಅಕ್ಷರಶಃ ಬೆಚ್ಚಿಬೀಳುವಂತೆ ಮಾಡಿದೆ. ಆ ಮೂಲಕ  ರಾಜ್ಯದ ಸೋಂಕಿತರ ಸಂಖ್ಯೆ1959ಕ್ಕೆ ಏರಿಕೆಯಾಗಿದೆ. ಇವತ್ತು 15 ಜಿಲ್ಲೆಗಳಲ್ಲಿ ಡೆಡ್ಲಿ ವೈರಸ್ ವಕ್ಕರಿಸಿಕೊಂಡಿದೆ. ರಾಜ್ಯದಲ್ಲಿಸಾವನ್ನಪ್ಪಿದ್ದವರ ಸಂಖ್ಯೆ 42 ಕ್ಕೆ ಏರಿಕೆಯಾಗಿದೆ. ಈವರೆಗೆ 608 ಜನ ಗುಣಮುಖರಾಗಿದ್ದು, 1307 ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವತ್ತು ಅತಿ ಹೆಚ್ಚು ಪ್ರಕರಣಗಳು ಯಾದಗಿರಿ ಜಿಲ್ಲೆಯಲ್ಲಿ ವರದಿಯಾಗಿದ್ದು, ಬರೋಬ್ಬರಿ  72 ಜನರಿಗೆ ಡೆಡ್ಲಿ ಕರೋನಾ […]

ರಾಜ್ಯ

ಪೊಲೀಸ್ ಜೀಪ್ ದುರ್ಬಳಕೆ ಮಾಡಿದ ಹುಬ್ಬಳ್ಳಿಯ ಪಿಎಸ್‌ಐ ಅಮಾನತು

ಹುಬ್ಬಳ್ಳಿ prajakiran.com : ಲಾಕ್ ಡೌನ್ ಅವಧಿಯಲ್ಲಿ ಪೊಲೀಸ್ ಜೀಪ್ ದುರ್ಬಳಕೆ ಮಾಡಿದ ಆರೋಪದ ಮೇಲೆ ಹುಬ್ಬಳ್ಳಿಯ ಪಿಎಸ್‌ಐ ಅಮಾನತುಗೊಂಡಿದ್ದಾರೆ. ಹುಬ್ಬಳ್ಳಿಯ ಪೊಲೀಸ್ ಅರಣ್ಯ ಘಟಕದ ಪಿಎಸ್‌ಐ ಶಿವಾನಂದ ಅರೆನಾಡ್ ಅಮಾನತು ಆದ ಪಿಎಸ್‌ಐ ಆಗಿದ್ದಾರೆ. ಅವರನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಅಮಾನತುಗೊಳಿಸಿ ಪೊಲೀಸ್ ಇಲಾಖೆ ಆದೇಶ ಹೊರಡಿಸಿದೆ. ಏ-17 ರಂದು ಅರಣ್ಯ ಘಟಕಕ್ಕೆ ಸೇರಿದ KA-25 G-303 ಸಾರ್ವಜನಿಕರು ತೆಗೆದುಕೊಂಡು ಹೋಗಲು ಅನುವು ಮಾಡಿಕೊಟ್ಟಿದ್ದ ಪಿಎಸ್‌ಐ  ಶಿವಾನಂದಅವರ ಆಡಿಯೋ ಹಾಗೂ ಅವರು ತೆಗೆದುಕೊಂಡು ಹೋಗಿದ್ದ ವಾಹನದ […]