ಧಾರವಾಡ prajakiran.com : ಧಾರವಾಡ ತಾಲೂಕಿನ ಕವಲಗೇರಿ ಹಾಗೂ ಗೋವನಕೊಪ್ಪ ಗ್ರಾಮದ ಕಾರ್ಮಿಕ ಮಹಿಳೆಯರಾದ ಬಸವನ್ನೆವ್ವ ಕುಲಕರ್ಣಿ ಹಾಗೂ ಮಂಜುಳಾ ತೋಟಗೆರ ಅವರ ಮೇಲೆ ಕಾಡು ಪ್ರಾಣಿ ದಾಳಿ ಮಾಡಿದೆ.
ಇಬ್ಬರು ಗಾಯಾಳುಗಳು ಧಾರವಾಡ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಾಗಿದ್ದು ಆಸ್ಪತ್ರೆಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.
ಆದರೆ ಕೆಲವರು ಚಿರತೆ ದಾಳಿ ಎಂದು ಸುಳ್ಳು ಸುದ್ದಿ ಹರಡುತ್ತಿದ್ದಾರೆ. ಇದು ಈವರೆಗೆ ಖಚಿತ ಗೊಂಡಿಲ್ಲ.
ಹೀಗಾಗಿ ಜನತೆ ಅನಗತ್ಯ ಗಾಳಿ ಸುದ್ದಿ ನಂಬಬೇಡಿ ಎಂದು ಜಿಲ್ಲೆಯ ಅರಣ್ಯ ಸಂರಕ್ಷಣಾಧಿಕಾರಿ ಯಶವಂತ ಕ್ಷಿರಸಾಗರ ಮನವಿ ಮಾಡಿದ್ದಾರೆ.
ಇದು ಚಿರತೆ ಅಥವಾ ತೋಳ ಇಲ್ಲವೇ ಬೇರೆ ಕಾಡುಪ್ರಾಣಿ ಇರಬಹುದು. ರಾತ್ರಿ ಜಿಲ್ಲೆಯ ಅರಣ್ಯ ಇಲಾಖೆಯ ವತಿಯಿಂದ ಕಾರ್ಯಾಚರಣೆ ನಡೆಸುವ ಮೂಲಕ ಅಧಿಕೃತ ಮಾಹಿತಿ ನೀಡಲಾಗುವುದು.
ಅಲ್ಲಿಯವರೆಗೆ ಜನತೆ ಅರಣ್ಯ ಅಧಿಕಾರಿಗಳಿಗೆ ಸಹಕಾರ ನೀಡಬೇಕು.
ತಕ್ಷಣ ಕಾಡು ಪ್ರಾಣಿಯನ್ನು ಗುರುತಿಸಿ ಸೇರೆ ಹಿಡಿಯುವ ಬಗ್ಗೆ ಸೂಚನೆ ನೀಡಲಾಗಿದೆ ಎಂದರು
ಜೊತೆಗೆ ಗ್ರಾಮಗಳಲ್ಲಿ ಸುರಕ್ಷತಾ ಕ್ರಮ ಕೈಗೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ಮಾತನಾಡಲಾಗಿದೆ ಎಂದು ಹೇಳಿದರು