ವರದಿ : ಪ್ರಶಾಂತ ಹೂಗಾರ.
ಬೈಲಹೊಂಗಲ prajakiran.com : ಸರ್ಕಾರಿ ಆಸ್ಪತ್ರೆಯ ವೈದ್ಯನೊಬ್ಬ ಎಸಿಬಿ ಬಲೆಗೆ ಬಿದ್ದ ಘಟನೆ ಬೈಲಹೊಂಗಲ್ ತಾಲ್ಲೂಕು ಆಸ್ಪತ್ರೆಯಲ್ಲಿ ನಡೆದಿದೆ.
ಡಾ.ವೀರೇಂದ್ರ ಕುಚಬಾಳ ಎಸಿಬಿ ಬಲೆಗೆ ಬಿದ್ದ ವೈದ್ಯ.
ಶಸ್ತ್ರ ಚಿಕಿತ್ಸೆಯಿಂದ ಹೆರಿಗೆ ಆಗಿದ್ದ ಬಾಣಂತಿಯನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ ಮಾಡಲು 7 ಸಾವಿರ ಹಣ ಬೇಡಿಕೆ ಇಟ್ಟಿದ್ದ.
ಹಣ ನೀಡವುದು ವಿಳಂಬವಾದ ಕಾರಣ ಡಿಸ್ಚಾರ್ಜ ಮಾಡದೆ ಸತಾಯಿಸುತ್ತಿದ್ದ,
ಇದರಿಂದ ಬೇಸತ್ತ ಮಹಿಳೆಯ ಪತಿ ಯಲ್ಲಪ್ಪ ಕೋಲಕಾರ ಎಸಿಬಿ ಗೆ ದೂರನ್ನು ನೀಡಿದ್ದರು.
ಇವರ ದೂರಿನ ಮೇರೆಗೆ ಬಂದ ಎಸಿಬಿ ಅಧಿಕಾರಿಗಳು ರೆಡ್ ಹ್ಯಾಂಡ್ ಆಗಿ ಡಾ. ವೀರೇಂದ್ರ ಕುಚಬಾಳನನ್ನು ಬಂಧಿಸಿದ್ದಾರೆ.