ಧಾರವಾಡ prajakiran. com : ರಾಜ್ಯದ ವಿವಿಧೆಡೆ ಇಂದು ಬೆಳ್ಳಂಬೆಳಿಗ್ಗೆ ಎಸಿಬಿ ಅಧಿಕಾರಿಗಳು ಭ್ರಷ್ಟ ಅಧಿಕಾರಿಗಳಿಗೆ ಶಾಕ್ ನೀಡಿದ್ದು , ಅವರ ಮನೆ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ .
ಧಾರವಾಡದಲ್ಲೂ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ, ಪರಿಶೀಲನೆ ನಡೆಸಿದ್ದಾರೆ .
ಬಾಗಲಕೋಟೆಯಲ್ಲಿ ಆರ್ಟಿಓ ಇನ್ಸ್ಪೆಕ್ಟರ್ ಆಗಿರುವ ಯಲ್ಲಪ್ಪ ಪಡಸಾಲೆ ಅವರ ಧಾರವಾಡದ ಲಕಮನಹಳ್ಳಿಯಲ್ಲಿರುವ ನಿವಾಸದ ಮೇಲೆ ಅಧಿಕಾರಿಗಳು ದಾಳಿ ನಡೆಸಿ ಶೋಧ ನಡೆಸಿದ್ದಾರೆ.
ಎಸಿಬಿ ಅಧಿಕಾರಿ ಮಹಾಂತೇಶ ಜಿದ್ದಿ ನೇತೃತ್ವದ ನಾಲ್ವರು ಅಧಿಕಾರಿಗಳ ತಂಡ ದಾಳಿ ನಡೆಸಿದ್ದು , ಪಡಸಾಲೆ ಅವರ ಮನೆಯಲ್ಲಿ ಶೋಧನಾ ಕಾರ್ಯ ಮುಂದುವರೆಸಿದ್ದಾರೆ.
ಅವರ ಬಾಗಲಕೋಟೆ ಮನೆ ಮೇಲೂ ದಾಳಿ ನಡೆದಿರುವುದು ಅಲ್ಲಿ ಕೂಡ ಅಪಾರ ಪ್ರಮಾಣದ ನಗ ನಾಣ್ಯ, ಆಸ್ತಿ ಪಾಸ್ತಿ ದೊರೆತಿದೆ ಎನ್ನಲಾಗಿದೆ